ಶಾಸಕರಾಗಿಯೇ ಕುರುಕ್ಷೇತ್ರದಂತಹ ಐತಿಹಾಸಿಕ ಚಿತ್ರ ನಿರ್ದೇಶಿಸಿರುವ ಮುನಿರತ್ನ ಭಾರೀ ಯಶಸ್ಸನ್ನು ಕಂಡಿದ್ದರು. 3ಡಿ ಹಾಗೂ 2ಡಿ ರೂಪದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾದಲ್ಲಿ ಸ್ಯಾಂಡಲ್‌ ವುಡ್‌ ನ ಬಹುತೇಕ ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದರು. ಅಂಬರೀಷ್‌, ಶ್ರೀನಾಥ್‌, ರವಿಚಂದ್ರನ್‌, ಶ್ರೀನಿವಾಸಮೂರ್ತಿ, ಭಾರತಿ ವಿಷ್ಣುವರ್ಧನ್‌, ದರ್ಶನ್‌, ಮೇಘನಾ ರಾಜ್‌, ಹರಿಪ್ರಿಯಾ, ರವಿಶಂಕರ್, ಸ್ನೇಹಾ ಹೀಗೆ ಅನೇಕ ತಾರೆಯರು ಚಿತ್ರದಲ್ಲಿದ್ದರು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ, ನಟ ನಿಖಿಲ್‌ ಕುಮಾರ್ ಕೂಡ ಈ ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದರು. ಆದರೆ, ಇದೀಗ ಮುನಿರತ್ನ ನಿರ್ಮಾಣದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದೇ ಧನುಷ್ ಐಪಿಎಸ್. 

 

ನಿಖಿಲ್ ಈಗ ಧನುಷ್ ಐಪಿಎಸ್

 

'ಧನುಷ್‌ ಐಪಿಎಸ್‌' ಅನ್ನೋದು ಸಿನಿಮಾದ ಟೈಟಲ್‌. ಈ ಚಿತ್ರದಲ್ಲಿ ನಿಖಿಲ್‌ಗೆ ಪೊಲೀಸ್ ಅಧಿಕಾರಿ ಪಾತ್ರ ಇದೆ ಎನ್ನಲಾಗಿದೆ. ಯಾಕೆಂದರೆ, ಶೀರ್ಷಿಕೆಯಲ್ಲೇ 'ಐಪಿಎಸ್‌' ಎಂದು ಇರುವುದರಿಂದ ಪಕ್ಕಾ ಖಡಕ್ ಪೊಲೀಸ್ ಅಧಿಕಾರಿಯ ಕಥೆಯಾಗಿದ್ದು, ಅದರಲ್ಲಿ ನಿಖಿಲ್‌ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ, ನಿರ್ದೇಶಕರು ಯಾರು ಅನ್ನೋದು ಖಚಿತವಾಗಿಲ್ಲ. ಜನವರಿ 22ರಂದು ನಿಖಿಲ್‌ ಜನ್ಮದಿನ. ಅಂದೇ ಅವರು ನಾಲ್ಕು ಹೊಸ ಸಿನಿಮಾಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ಅದರಲ್ಲಿ 'ಧನುಷ್‌ ಐಪಿಎಸ್‌' ಕೂಡ ಒಂದು. ಲಹರಿ ಸಂಸ್ಥೆಯ ಜೊತೆಗಿನ ಸಿನಿಮಾ ಜನವರಿ 30ಕ್ಕೆ ಶುರುವಾದರೆ, ಜೂನ್‌ನಲ್ಲಿ ಎ.ಪಿ. ಅರ್ಜುನ್‌ ನಿರ್ದೇಶನದ ಸಿನಿಮಾ ಶುರುವಾಗಲಿದೆ. ಆದರೆ, 'ಧನುಷ್‌ ಐಪಿಎಸ್‌' ಯಾವಾಗ ಆರಂಭಗೊಳ್ಳಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

 

'ಮುನಿರತ್ನ ಕುರುಕ್ಷೇತ್ರ' ಚಿತ್ರವು ನಟ ದರ್ಶನ್ ಅವರ 50ನೇ ಚಿತ್ರವಾಗಿತ್ತು. ಆನಂತರ ಸಿನಿಮಾದಲ್ಲಿ ನಿಖಿಲ್‌ ಅಭಿಮನ್ಯು ಪಾತ್ರ ಮಾಡಲಿದ್ದಾರೆ ಎಂದು ಸುದ್ದಿ ಆಯ್ತು. ಆದರೆ, ನಂತರ ದಿನಗಳಲ್ಲಿ ನಿಖಿಲ್‌ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ನೀಡಲಾಗಿದೆ ಎಂಬ ಚರ್ಚೆಗಳು ನಡೆದಿದ್ದವು. ಜೊತೆಗೆ ಸಿನಿಮಾದಲ್ಲಿನ ತಮ್ಮ ಪಾತ್ರದ ಡಬ್ಬಿಂಗ್‌ ಅನ್ನು ನಿಖಿಲ್ ಮಾಡಿಲ್ಲ ಎಂಬ ಸುದ್ದಿ ಹಬ್ಬಿತ್ತು. ಕೊನೆಗೆ ನಿಖಿಲ್‌ ಡಬ್ಬಿಂಗ್ ಮಾಡಿದ್ದರು. ಇದೀಗ ನಿಖಿಲ್ ಅಭಿಮಾನಿಗಳು ಧನುಷ್ ಐಪಿಎಸ್ ಚಿತ್ರಕ್ಕಾಗಿ ಕಾಯುತ್ತಾ ಕುಳಿತ್ತಿದ್ದಾರೆ.

మరింత సమాచారం తెలుసుకోండి: