ಕೊರೋನಾ ಸೋಂಕು ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನ ಕೇಸ್ ಗಳು ಹೆಚ್ಚುತ್ತಲೇ ಇದೇ ಪ್ರತಿ ನಿತ್ಯ ದೇಶದ ಮಹಾನಗರಗಳಲ್ಲಿ ಕೊರೋನಾ ಸೋಂಕಿನ ಉಪಟಳ ಹೆಚ್ಚಾಗಿ ಪ್ರತಿನಿತ್ಯವೂ ಕೂಡ ಕೊರೋನಾ ಸೋಂಕಿನ ಸಂಖ್ಯೆ ಮೂರಂಕಿಯನ್ನು ದಾಟಿ ಮುನ್ನಡೆಯುತ್ತಲೇ ಇದೆ . ಅದೇ  ರೀತಿ ಕಳೆದ 24ಗಂಟೆಯಲ್ಲಿ ಕೂಡ ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕು ದೃಡ ಪಟ್ಟಿದೆ. ಅಷ್ಟಕ್ಕೂ ಇಂದು ದೇಶದಲ್ಲಿ ಕೊರೋನಾ ಸೋಂಕು ದಾಖಲಾದ ಸಂಖ್ಯೆ ಎಷ್ಟು ಗೊತ್ತಾ…?

 

ಮಹಾರಾಷ್ಟ್ರದಲ್ಲಿ ಒಂದೇ ದಿನ 105 ಮಂದಿ ಸಾವಿಗೀಡಾಗಿದ್ದಾರೆ. ಇದೇ ಮೊದಲ ಬಾರಿ ಸಾವಿನ ಸಂಖ್ಯೆ 100 ದಾಟಿದೆ. ಸಾವಿಗೀಡಾದವರಲ್ಲಿ 32 ಮಂದಿ ಮುಂಬೈಯವರಾಗಿದ್ದಾರೆ. ಮಂಗಳವಾರ 97 ಮಂದಿ ಸಾವಿಗೀಡಾಗಿದ್ದರು. ಈವರೆಗೆ ಸಾವಿಗೀಡಾದವರ ಸಂಖ್ಯೆ 1,897 ಆಗಿದೆ. ಕಳೆದ 24 ಗಂಟೆಗಳಲ್ಲಿ 2,190 ಪ್ರಕರಣಗಳು ವರದಿಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 53,948 ಆಗಿದೆ. 17,918 ಮಂದಿ ಗುಣಮುಖರಾಗಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಒಂದೇ ದಿನ 162 ಪ್ರಕರಣಗಳು ಪತ್ತೆಯಾಗಿದ್ದು ಪ್ರಕರಣಗಳ ಸಂಖ್ಯೆ 1,921 ಆಗಿದೆ. ಮುಂಬೈಯ ಧಾರಾವಿಯಲ್ಲಿ ಬುಧವಾರ 18 ಪ್ರಕರಣಗಳು ಪತ್ತೆಯಾಗಿದ್ದು ಕೊರೊನಾವೈರಸ್ ಸೋಂಕಿತರ ಸಂಖ್ಯೆ 1639ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್‌ಸೈಟ್ ಮಾಹಿತಿ ಪ್ರಕಾರ ಬುಧವಾರ ದೇಶದಲ್ಲಿ ಸೋಂಕಿತರ ಸಂಖ್ಯೆ 1,51,767 ಆಗಿದೆ. ಇಲ್ಲಿಯವರೆಗೆ 64426 ಮಂದಿ ಚೇತರಿಸಿಕೊಂಡಿದ್ದು, ಸಾವಿನ ಸಂಖ್ಯೆ 4337ಕ್ಕೆ ತಲುಪಿದೆ. 83004 ಸಕ್ರಿಯ ಪ್ರಕರಣಗಳಿವೆ. ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 6387 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. 170 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

 

ಮಣಿಪುರದಲ್ಲಿಂದು 5 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟವರ ಸಂಖ್ಯೆ 44ಕ್ಕೇರಿದ್ದು ಇದರಲ್ಲಿ 40 ಸಕ್ರಿಯ ಪ್ರಕರಣಗಳಿವೆ ಎಂದು ಮಣಿಪುರ ಸರ್ಕಾರ ಹೇಳಿದೆ.

 

ಅಸ್ಸಾಂನಲ್ಲಿ ಹೊಸತು 60 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 774 ತಲುಪಿದೆ. 62 ಮಂದಿ ಈವರೆಗೆ ಚೇತರಿಸಿಕೊಂಡಿದ್ದು 4 ಮಂದಿ ಸಾವಿಗೀಡಾಗಿದ್ದಾರೆ. 3 ಮಂದಿ ವಲಸೆ ಹೋಗಿದ್ದಾರೆ. ಪ್ರಸ್ತುತ 705 ಸಕ್ರಿಯ ಪ್ರಕರಣಗಳು ಇಲ್ಲಿವೆ ಎಂದು ಆರೋಗ್ಯ ಸಚಿವ ಹಿಮಾಂತ ಬಿಸ್ವ ಶರ್ಮ ಹೇಳಿದ್ದಾರೆ.

 

ತಮಿಳುನಾಡಿನಲ್ಲಿ 817 ಮಂದಿಗೆ ಕೊರೊನಾಸೋಂಕು ದೃಢಪಟ್ಟಿದೆ. 6 ಮಂದಿ ಇವತ್ತು ಸಾವಿಗೀಡಾಗಿದ್ದು 567 ಮಂದಿ ಚೇತರಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ವರದಿಯಾಗಿರುವ 18545 ಪ್ರಕರಣಗಳಲ್ಲಿ 133 ಮಂದಿ ಸಾವಿಗೀಡಾಗಿದ್ದು, 133 ಮಂದಿ ಸಾವಿಗೀಡಾಗಿದ್ದಾರೆ. 9909 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಹರಿಯಾಣದಲ್ಲಿ ಮಾಸ್ಕ್ ಧರಿಸದೇ ಇದ್ದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳಿದರೆ 500ರೂ ದಂಡ ವಿಧಿಸುವುದಾಗಿ ಗೃಹ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

 

ಕೇರಳದಲ್ಲಿ 40 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇವುಗಳ ಪೈಕಿ 9 ಮಂದಿ ವಿದೇಶದಿಂದ ಬಂದವರಾಗಿದ್ದಾರೆ.16 ಮಂದಿ ಮಹಾರಾಷ್ಟ್ರ, ತಮಿಳುನಾಡಿನಿಂದ 5 ಮತ್ತು ದೆಹಲಿಯಿಂದ ಬಂದ ಮೂವರಿಗೆ ಸೋಂಕು ದೃಢಪಟ್ಟಿದೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 1004ಕ್ಕೆ ತಲುಪಿದ್ದು, ಇದರಲ್ಲಿ 445 ಸಕ್ರಿಯ ಪ್ರಕರಣಗಳಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

 

ಮಂಗಳವಾರದವರೆಗೆ ವಿವಿಧ ದೇಶಗಳಲ್ಲಿ ಕೋವಿಡ್-19 ನಿಂದಾಗಿ ಸಾವಿಗೀಡಾದ ಕೇರಳಿಗರ ಸಂಖ್ಯೆ173 ಆಗಿದೆ ಎಂದು ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಜೂನ್ 30ರ ವರೆಗೆ ಶಾಲೆಗಳು ತೆರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

మరింత సమాచారం తెలుసుకోండి: