ಮಂಡ್ಯದ ಲೋಕಸಭಾ ಚುನಾವಣೆ ಕ್ಷೇತ್ರ ರಾಜ್ಯಾದಾಚೆಗೂ ಗಮನ ಸೆಳೆದಿತ್ತು.‌ ಅದರಲ್ಲೂ ಹಾಲಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಎದುರಾಳಿಯಾಗಿ ನಟ ಅಂಬರೀಶ್ ಅವರ ಹೆಂಡತಿ ಸುಮಲತಾ ಈ ಕ್ಷೇತ್ರದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಹಾಗಾದ್ರೆ ಇಲ್ಲಿ ಜನರು ಯಾರಿಗೆ ಜೈ ಅಂದಿದ್ದಾರೆ ಅನ್ನೋದಕ್ಕೆ ಉತ್ತರ ಇಲ್ಲಿದೆ.

ಮಂಡ್ಯದಲ್ಲಿ ಜೆಡಿಸ್ ಹವಾ ಇದೆ ಎಂದೇ ಹೇಳಲಾಗಿತ್ತು. ಅದರಲ್ಲೂ ಜೆಡಿಎಸ್ ಪಕ್ಷದ ಶಾಸಕರೇ ಈ ಕ್ಷೇತ್ರದಲ್ಲಿದ್ದರು. ಆದರೆ ಸಿನಿಮಾ ನಟರಾದ ದರ್ಶನ್ ಹಾಗೂ ಯಶ್ ಸುಮಲತಾ ಪರ ಪ್ರಚಾರ ಆರಂಭಿಸಿದ ನಂತರ ಸುಮಲತಾ ಪರವಾಗಿ ಹವಾ ಕ್ರೀಯೇಟ್ ಆಗ್ತಾ ಬಂತು.

ಅಲ್ಲದೇ ಅಂಬರೀಶ್ ಅವರ ನಿಧನದಿಂದ ಅನುಕಂಪದ ಓಟುಗಳು ಸುಮಲತಾ ಕಡೆಗೆ ಹರಿದು ಬಂದಿವೆ. ಜೊತೆಗೆ ರಾಜ್ಯದಲ್ಲಿ ಮಾಧ್ಯಮಗಳು ನೀಡಿದ ಪ್ರಚಾರ ಸುಮಲತಾಗೆ ಪ್ಲಸ್ ಪಾಯಿಂಟ್ ಆಗಿದೆ.

ಒಟ್ಟರೆಯಾಗಿ ಇದೀಗ ಸುಮಲತಾ ಅಂಬರೀಶ್ ಮಂಡ್ಯದಿಂದ ಆಯ್ಕೆ ಆಗಿದ್ದಾರೆ. ಆದರೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎನ್ನಲಾಗಿದೆ. ಸಿಎಂ‌ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ತಮ್ಮ ಮೊದಲ ಚುನಾವಣೆಯಲ್ಲಿಯೇ ಸೋಲನ್ನಪ್ಪಿದ್ದಾರೆ. 


మరింత సమాచారం తెలుసుకోండి: