ಗುಳ್ಟು ಚಿತ್ರ ಮಾಡಿದ್ದ ನಿರ್ದೇಶಕ ಜನಾರ್ಧನ್ ನಂತರ ಯಾವ ಸಿನಿಮಾ ಮಾಡ್ತಾರೆ ಅನ್ನೋದರ ಬಗ್ಗೆ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಜನಾರ್ಧನ್ ಅವರಯ ಕಾದಂಬರಿ ಆಧಾರಿತ ಚಿತ್ರ ಮಾಡೋಕೆ ಜೈ ಎಂದಿದ್ದಾರೆ. ಆ ಕಾದಂಬರಿ ಯಾವುದು ಗೊತ್ತಾ?

 

 

ರವಿ ಬೆಳಗೆರೆ ಅವರ ಒಮರ್ಟಾ ಕಾದಂಬರಿ ಇಟ್ಕೊಂಡು ಜನಾರ್ಧನ್ ಅವರು ತಮ್ಮ ಎರಡನೇ ಚಿತ್ರ ನಿರ್ದೇಶನ ಮಾಡೋಕೆ ತಯಾರಿ ಆಗಿದ್ದಾರೆ. ಈ ಕಾದಂಬರಿ ಕಥಾವಸ್ತು ಅಂಡರ್ ವರ್ಲ್ಡ್. ಹೌದು ಭೂಗತ ಲೋಕದ ಹಲವು ಮುಖಗಳನ್ನು ಈ ಕಾದಂಬರಿ ತೆರೆದಿಡುತ್ತದೆ.

 

 

ಮೊದಲು ಸ್ಕ್ರಿಪ್ಟ್ ಮುಗಿಸಿ ನಂತರ ಹೀರೋ ಹಾಗೂ ಇತರ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಜನಾರ್ಧನ್ ಅವರು ಹೇಳಿದ್ದರು. ಹೀಗಾಗಿ ಈ ಚಿತ್ರಕ್ಕೆ ಇದೀಗ ಹೀರೋ ಕೂಡ ಸಿಕ್ಕಾಗಿದೆ. ಅವರೇ ಅನಿಶ್ ತೇಜೇಶ್ವರ್. ಕ್ಲೈ ಮ್ಯಾಕ್ಸ್ ಭಾಗದ ಬರವಣಿಗೆ ನಡೆಯುತ್ತಿದ್ದು, ಎಲ್ಕವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ನಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆಯನ್ನು ಫೈನಲ್ ಮಾಡಿಲ್ಲ. 

 

మరింత సమాచారం తెలుసుకోండి: