ಚಿತ್ರರಂಗದಲ್ಲಿ ನಡೆಯುವ ಹಾಗೂ ರಾಜಕೀಯದಲ್ಲೂ ನಡೆಯುವ ಅದೆಷ್ಟೋ ಘಟನೆಗಳಿಗೆ ನಟ ಜಗ್ಗೇಶ್ ಅವರು ಪ್ರತಿಕ್ರಿಯೆ ನೀಡುತ್ತಾರೆ. ಇದೀಗ ವಿನೋದ್ ರಾಜ್ ಕುಮಾರ್ ಅವರ ಬಗ್ಗೆ ಟ್ವೀಟ್ ಮಾಡಿರುವ ಅವರು, ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಜಗ್ಗೇಶ್ ಮಾಡಿದ ಆ ಟ್ವೀಟ್ ಏನು ಅನ್ನೋದು ಇಲ್ಲಿದೆ ನೋಡಿ.


ನಟ ವಿನೋದ್ ರಾಜ್ ಕುಮಾರ್ ಅವರನ್ನು ಕಡೆಗಣಿಸಲಾಗುತ್ತಿದೆ, ಅನ್ನುವುದೇ ಜಗ್ಗೇಶ್ ಅವರ ಬೇಸರ, ವಿನೋದ್ ರಾಜ್ ಅವರನ್ನು ಬಹಳ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದಾರೆ ನಟ ಜಗ್ಗೇಶ್. ಅಲ್ಲದೇ ವಿನೋದ್ ರಾಜ್ಕುಮಾರ್ ಅವರಿಗೆ ಒಂದು ಉತ್ತಮ ವೇದಿಕೆ ಸಿಗಬೇಕು ಎಂದು ಅವರು ಅಭಿಲಾಷೆ ವ್ಯಕ್ತಪಡಿಸಿದ್ದಾರೆ.


ಡ್ಯಾನ್ಸ್ ಶೋ ಗಳಲ್ಲಿ ವಿನೋದ್ ರಾಜ್ ಕುಮಾರ್ ಇರಬೇಕು. ಕನ್ನಡದ ಬಹುತೇಕ ವಾಹಿನಿಗಳಲ್ಲಿ ಡ್ಯಾನ್ಸ್ ಕಾರ್ಯಕ್ರಮ ಇರುತ್ತದೆ. ಅಂತಹ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಕುಳಿತ ಕೆಲವರಿಗೆ ಡ್ಯಾನ್ಸ್ ಬರೋದಿಲ್ಲ. ಅಂತಹ ತೀರ್ಪುಗಾರರಿಗೆ ಸ್ಥಾನ ನೀಡುವ ಬದಲು ವಿನೋದ್ ರಾಜ್ ಕುಮಾರ್ ಅವರಿಗೆ ಈ ಸ್ಥಾನ ನೀಡಬೇಕು ಎಂದು ನಟ ಜಗ್ಗೇಶ್ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


మరింత సమాచారం తెలుసుకోండి: