ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರು ಅಭಿನಯಿಸಿದ ಮಾಣಿಕ್ಯ ಮತ್ತಯ ಹೆಬ್ಬುಲಿ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗಿದ್ದವು. ಭರ್ಜರಿ ಸಕ್ಸಸ್ ಕಂಡಿದ್ದವು. ಹೀಗಾಗಿ ಇಬ್ಬರನ್ನೂ ಅಂದರೆ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅವರನ್ನು ಕಮಾಲ್ ಮಾಡುವ ಜೋಡಿ ಎಂದು ಹೇಳಲಾಗುತ್ತದೆ. ಇದೀಗ ಈ ಇಬ್ಬರೂ ಸೇರಿ ಮತ್ತೊಂದು ಚಿತ್ರ ಮಾಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಸೇರಿದರೆ ಆ ಚಿತ್ರ ಸೂಪರ್ ಡೂಪರ್ ಆದಂತೆಯೇ ಸರಿ ಎಂದು ಸ್ಯಾಂಡಲ್ ವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. 

ಹೌದು, ಇದೀಗ ಮೂರನೇ ಬಾರಿಗೆ ಈ ಜೋಡಿ ಕಿಚ್ಚ-ಕೇಜ್ರಿ ಜೋಡಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಹಾಗಾದರೆ ಯಾವ ಚಿತ್ರದ ಮೂಲಕ ಅವರು ತೆರೆ ಮೇಲೆ ಬರುತ್ತಿದ್ದಾರೆ ಅನ್ನೋದನ್ನು ನೋಡಿದರೆ, ಅದರ ಹೆಸರು ರವಿ ಬೋಪಣ್ಣ. ಕೆಲ ತಿಂಗಳು ಹಿಂದೆಯೇ  ಸೆಟ್ಟೇರಿದ್ದ ರವಿಚಂದ್ರನ್ ಅಭಿನಯದ ಈ ಸಿನಿಮಾದಲ್ಲಿ ಸುದೀಪ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿಯೊಂದು ಹೊರ ಬಿದ್ದಿದೆ. ಹೀಗಾಗಿ ಕಿಚ್ಚ ಅಭಿಮಾನಿಗಳಲ್ಲಿ ಸಹಜವಾಗಿಯೇ ಕುತೂಹಲ ಮನೆ ಮಾಡಿದೆ.

ಈ ಹಿಂದೆಯೇ ಈ ಚಿತ್ರವನ್ನು ಕೈಗೆತ್ತಿಕೊಂಡವರು ಎಂದರೆ ಅದು ಅಜಿತ್. ಆದರೆ ಸ್ವಲ್ಪ ಸಮಯದ ನಂತರ ಅಜಿತ್ ಅವರು, ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೆಗಲಿಗೆ ಹಾಕಿದ್ದಾರೆ. ಹೀಗಾಗಿ ರವಿ ಬೋಪಣ್ಣ ಎನ್ನುವ ಚಿತ್ರಕ್ಕೆ ಇದೀಗ ರವಿಚಂದ್ರನ್ ಅವರೇ ಸಂಪೂರ್ಣವಾಗಿ ಆಕ್ಷನ್ ಕಟ್ ಹೇಳಲಿದ್ದಾರೆ. ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. 

ಅಷ್ಟಕ್ಕೂ ಈ ಚಿತ್ರ ಕತೆ ಏನು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಇತ್ತೀಚೆಗೆ ದೇಹಾಂಗದ ಮಾಫಿಯಾ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಮಾಫಿಯಾದಿಂದ ಅನೇಕ ಕೊಲೆಗಳು ನಡೆಯುತ್ತಿವೆ. ಇದೊಂದು ಕ್ರೈಮ್ ಆಧಾರಿತ ಚಿತ್ರ ಎನ್ನಲಾಗುತ್ತಿದ್ದು, ಈ ಚಿತ್ರದಲ್ಲಿ ರವಿಚಂದ್ರನ್ ಅವರು ಪೊಲೀಸ್ ಕಾನ್‌ಸ್ಟೇಬಲ್ ಆಗಿ ಅಭಿನಯ ಮಾಡಲಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಚಿತ್ರದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. 

ಅಷ್ಟಕ್ಕೂ ಇದು ಕನ್ನಡದ್ದೆ ಅಲ್ಲ, ಮಲಯಾಳಂನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ಜೋಸೆಫ್ ಚಿತ್ರದ ರಿಮೇಕ್ ಇದಾಗಿದ್ದು, ಈ ಚಿತ್ರವನ್ನು ಕೊಡಗಿನ ಸುತ್ತಲೂ ಚಿತ್ರಿಕರಿಸಲು ರವಿ ಬೋಪಣ್ಣ ಚಿತ್ರದ ಟೀಂ ಪ್ಲ್ಯಾನ್ ಹಾಕಿಕೊಂಡಿದೆ.  ಹಾಗಾದರೆ ಈ ಚಿತ್ರ ಕನ್ನಡದಲ್ಲಿ ಅದ್ಹೇಗೆ ಮೂಡಿ ಬರಬಹುದು ಅನ್ನೋದನ್ನು ಕಾದು ನೋಡಬೇಕಿದೆ. ಈ ಹಿಂದೆ ಮೋಹನ್ ಲಾಲ್ ಅವರು ಅಭಿನಯಿಸಿದ್ದ ಮಲಯಾಳಂನ ದೃಶ್ಯ ಸಿನಿಮಾದ ರಿಮೇಕ್‌ನಲ್ಲಿ ರವಿಚಂದ್ರನ್ ಅವರು ನಟಿಸಿದ್ದರು. ಅಲ್ಲದೇ ಈ ಚಿತ್ರ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡಿತತ್ತು. ಇದೀಗ ಮತ್ತೊಂದು ಸಸ್ಪೆನ್ಸ್ ಕತೆಯೊಂದಿಗೆ ಕ್ರೇಜಿ ಸ್ಟಾರ್ ಅವರು ತೆರೆ ಮೇಲೆ ಬರುತ್ತಿದ್ದಾರೆ. 


మరింత సమాచారం తెలుసుకోండి: