ಕನ್ನಡದಲ್ಲಿ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರಗಳೆಂದರೆ ಅದು ತುಂಬ ಕಡಿಮೆಯೇ ಅದರಲ್ಲೂ ಇತ್ತೀಚೆಗೆ ಕನ್ನಡದಲ್ಲಿ ಒಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ ಸದ್ದು ಮಾಡುತ್ತಿದೆ. ಹಾಗಾದರೆ ಆ ಸಿನಿಮಾ ಯಾವುದು? ಅದರ ವಿಶೇಷತೆ ಏನು ಅನ್ನೋದು ಇಲ್ಲಿದೆ ನೋಡಿ.


ಟೈಟಲ್ ಮೂಲಕವೇ ಎಲ್ಲರನ್ನು ಆಕರ್ಷಿಸಿದ್ದ ಚಿತ್ರ ಎಂದರೆ ಅದು 'ಆಟಕ್ಕುಂಟು ಲೆಕ್ಕಕ್ಕಿಲ್ಲ'. ಹೌದು ಇದು ನಿರ್ದೇಶಕ ರಾಮ್ ಜೆ ಚಂದ್ರ ಅವರ ಮೊಟ್ಟ ಮೊದಲ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಚಿತ್ರ. ಈ ಚಿತ್ರದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಇಲ್ಲಿಯವರೆಗೂ ಕ್ರಿಯೇಟಿವ್ ಪೋಸ್ಟರ್‍ ಕಾರಣದಿಂದಲೇ ಈ ಚಿತ್ರವಿ ಅನೇಕರ ಗಮನವನ್ನು ಸೆಳೆದಿಕೊಂಡಿದೆ. ಅಷ್ಟೇ ಅಲ್ಲದೇ ಈ ಸಿನಿಮಾದ ಟ್ರೇಲರ್ ಕಂಡು ಪ್ರೇಕ್ಷಕರೆಲ್ಲ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ದೊಡ್ಡ ಮಟ್ಟಿಗೆ ಟ್ರೇಲರ್ ಸದ್ದು ಮಾಡುತ್ತಿರೋದು ಸತ್ಯ.


ಅಷ್ಟಕ್ಕೂ ಈ ಸಿನಿಮಾ ನಿರ್ಮಾಣ ಆಗಿರೋದು ವಸುಂಧರಾ ಕೃತಿಕ್ ಫಿಲಂಸ್ ಲಾಂಛನದಡಿಯಲ್ಲಿ. ಈ ಚಿತ್ರ ಸೈಕಾಲಾಜಿಕಲ್ ಥ್ರಿಲ್ಲರ್ ಅನೇಕ ಸಿದ್ದ ಸೂತ್ರಗಳನ್ನು ಮೀರಿದೆ ಎನ್ನಬಹುದು. ಹೌದು ಈ ಕುರಿತು ಚಿತ್ರತಂಡ ಆರಂಭದಿಂದಲೇ ಹೇಳಿಕೊಂಡು ಬಂದಿತ್ತು. ಹಾಗೆ ಚೌಕಟ್ಟಿನಾಚೆ ಹೊಸೆಯಲ್ಪಟ್ಟಿರೋ ಈ ಕಥೆಯ ಅಸಲೀ ಮಜಾ ಏನೆಂಬುದರ ಝಲಕ್‍ ಗಳು ಈ ಟ್ರೇಲರ್ ಮೂಲಕವೇ ಅನಾವರಣಗೊಂಡಿದೆ.  


ಈ ಚಿತ್ರದಲ್ಲಿ ಅನೇಕ ನಟ ನಟಿಯರು ಭಾಗವಹಿಸಿದ್ದಾರೆ. ಅದರಲ್ಲೂ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್, ಮಯೂರಿ ಮತ್ತು ದುನಿಯಾ ರಶ್ಮಿ ಅವರು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಹೀಗಾಗಿ ಈ ಚಿತ್ರಕತೆ  ಸಾಧಾರಣದ್ದಲ್ಲ ಎನ್ನುವಂತಾಗಿದೆ. ಇನ್ನು ಚಿತ್ರದ ಈ ಟ್ರೇಲರ್ ಕಂಡು ಥ್ರಿಲ್ ಆಗಿರುವ ಪ್ರೇಕ್ಷಕರೆಲ್ಲ ಬಿಡುಗಡೆಯ ದಿನಕ್ಕಾಗಿ ಎದುರು ನೋಡಲಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಇದ್ದಾರೆ ಅಷ್ಟೇ ಅಲ್ಲದೇ, ಭರತ್ ಸಾಗರ್, ಬೇಬಿ ಪ್ರಾಜ್ಞಾ ಮುಂತಾದವರ ತಾರಾಗಣವಿದೆ. ಇನ್ನು ಚಿತ್ರಕ್ಕೆ ಪರಮೇಶ್ ಸಿ.ಎಂ.  ಅವರು ಛಾಯಾಗ್ರಹಣ ಮಾಡಿದ್ದಾರೆ. ನೊಬಿನ್ ಪೌಲ್ ಅವರ ಸಂಗೀತ ಈ ಚಿತ್ರಕ್ಕಿದೆ. ಇನ್ನು ಒಟ್ಟಾರೆಯಾಗಿ ಹೇಳಬೇಕು ಎಂದರೆ, ಇದು ಮಾಮೂಲಿ ಸೈಕಾಲಾಜಿಕಲ್ ಕ್ರೈಂ ಥ್ರಿಲ್ಲರ್ ಕಥೆ ಹೊಂದಿರೋ ಚಿತ್ರವಲ್ಲ ಎಂದು ಈ ಟ್ರೇಲರ್ ಹೇಳುತ್ತಿದೆ.  


మరింత సమాచారం తెలుసుకోండి: