ಕಾಮಿಡಿ ಕಿಲಾಡಿ, ನವರಸ ನಾಯಕ ಜಗ್ಗೇಶ್ ಅಂದರೆ ಯಾರಿಗೆ ಗೋತ್ತಿಲ್ಲ ಹೇಳಿ. ಅಲ್ವಾ. ತನ್ನ ಕಾಮಿಡಿ ಹಾಗೂ ಶೈಲಿಯ ಮೂಲಕ ಕನ್ನಡ ಸಿನಿ ಪ್ರಿಯರ ಮನೆ ಮಾತಾಗಿದ್ದಾರೆ ಜಗ್ಗೇಶ್. ಇತ್ತೀಚಿನ ದಿನಗಳಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ನೀಡಿ, ನಾಯಕ ನಟನಾಗಿ ಮಿಂಚುತಿದ್ದಾರೆ. ಪ್ರಸ್ತುತ ಇದೀಗ ಜಗ್ಗೇಶ್ ಗೆ ಡಬ್ಬಲ್ ಖುುಷಿ ಆಗಿರೋದು ಯಾಕೆ ಅಂದ್ರೆ, ಜಗ್ಗೇಶ್ ಮುಖ್ಯ ಭೂಮಿಕೆಯ ತೋತಪುರಿ ಸಿನಿಮಾ ಎರಡು ಭಾಗಗಳಲ್ಲಿ ಶೂಟಿಂಗ್ ಆಗುತ್ತಿದೆ ಸಿನಿಮಾ ರಿಲೀಸ್ ಗೂ ಮುನ್ನ ಇಂಥದೊಂದು ಪ್ರಯೋಗ ಮಾಡುತ್ತಿರುವ ಭಾರತದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೂ ಸಹ ಈ ಚಿತ್ರ ಪಾತ್ರವಾಗಿದೆ. 


ಹಾಗಾಗಿ ಸಹಜವಾಗಿಯೇ ಜಗ್ಗೇಶ್ ಅವರಿಗೆ ಡಬಲ್ ಖುಷಿ ತಂದಿದೆಯಂತೆ. ನಿರ್ದೇಶಕ ವಿಜಯಪ್ರಸಾದ್ ಎರಡು ಭಾಗಗಳಿಗೂ ವಿಭಿನ್ನ ಉಪಶೀರ್ಷಿಕೆ ನೀಡಿದ್ದಾರೆ ಮೊದಲ ಭಾಗಕ್ಕೆ "ತೊಟ್ಟು ಕೇಳುವುದಷ್ಟೇ ಬಾಕಿ"ಎಂದು ಹೆಸರು ಕೊಟ್ಟಿದ್ದರೆ, ಎರಡನೇ ಭಾಗಕ್ಕೆ "ತೊಟ್ಟು ಕಿತ್ತಾಯಿತು"ಎಂದು ನಾಮಕರಣ ಮಾಡಿದ್ದಾರೆ. ಸತತವಾಗಿ ಸಾಂಸ್ಕೃತಿಕ ನಗರಿ ಮಲ್ಲಿಗೆಯ ಬೀಡಾದ ಮೈಸೂರಿನಲ್ಲಿ ಶೂಟಿಂಗ್ ಮಾಡುವ ಮೂಲಕ ಮೊದಲ ಭಾಗದ ಚಿತ್ರೀಕರಣವನ್ನು ಚಿತ್ರತಂಡ ಸಂಪೂರ್ಣ ಮುಗಿಸಿದೆ. 


ಇನ್ನು ಕೆಲವೇ ದಿನಗಳಲ್ಲಿ ಎರಡನೇ ಭಾಗದ ಶೂಟಿಂಗ್ ಕೂಡ ಶುರುವಾಗಲಿದೆ. ನೀರ್ ದೋಸೆ ಚಿತ್ರದ ನಂತರ ಜಗ್ಗೇಶ್ ಮತ್ತು ವಿಜಯಪ್ರಸಾದ್ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಶಿವಲಿಂಗ ಚಿತ್ರ ಖ್ಯಾತಿಯ ಕೆ ಎ ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡಾಲಿ ಧನಂಜಯ್, ಅದಿತಿ ಪ್ರಭುದೇವ್, ದತ್ತಣ್ಣ ಸೇರಿದಂತೆ ಹೆಸರಾಂತ ಕಲಾವಿದರ ದಂಡೇ  ಚಿತ್ರ ತಂಡದಲ್ಲಿದೆ. 


ಕನ್ನಡದ ಸಿನಿಮಾ ಒಂದು ಮೊದಲಬಾರಿಗೆ ಎರಡು ಭಾಗಗಳಲ್ಲಿ ಶೂಟ್ ಆಗುತ್ತಿದೆ ನಮಗೆ ಗೊತ್ತಿರುವಂತೆ ಭಾರತೀಯ ಸಿನಿಮಾ ರಂಗದಲ್ಲಿ ಇಂಥದ್ದೊಂದು ಪ್ರಯೋಗ ಆಗುತ್ತಿರುವುದು ಇದೇ ಮೊದಲು. ಎರಡು ಭಾಗದಲ್ಲೂ ವಿಭಿನ್ನವಾಗಿ ಕಥೆ ಹೇಳಿದ್ದಾರೆ ನಿರ್ದೇಶಕರು ಈ ಪ್ರಯೋಗವನ್ನು ಪ್ರೇಕ್ಷಕರು ಕೂಡ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮದು ಎನ್ನುತ್ತಾರೆ ಸುರೇಶ್.


మరింత సమాచారం తెలుసుకోండి: