ಇನ್ಫೋಸಿಸ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪನಿಯು ಇಂದು ಎಷ್ಟೇಲ್ಲಾ ಹೆಸರು ಮಾಡಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಇದೀಗ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿಯ ಲವ್ ಸ್ಟೋರಿ ಚಿತ್ರವಾಗಿ ಸೆಟ್ಟೇರುತ್ತಿದೆ. ಈ ಜೋಡಿಯ ಪ್ರೇಮ ಪುರಾಣ, ಗೆಲುವಿನ ಹಾದಿ, ಸರಳತೆ ನೋಡಿದ ಜನರು ಇವರು ನಿಜವಾದ ಆದರ್ಶ ದಂಪತಿ ಎಂದು ಮಾತನಾಡಿಕೊಂಡಿದ್ದರು. ಈ ಅಪರೂಪದ ಜೋಡಿಯ ಸ್ಫೂರ್ತಿದಾಯಕ ಕಥೆ ಇದೀಗ ಸಿನಿಮಾವಾಗಿ ಮೂಡಲು ಶುರುವಾಗಿದೆ.


ಇನ್ಫೋಸಿಸ್​​ ನಾರಾಯಣ ಮೂರ್ತಿ ದಂಪತಿ ಜೀವನವನ್ನಾಧರಿಸಿ, ಬಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗಿದೆ. ಇದಕ್ಕೆ ಸುಧಾಮೂರ್ತಿ ಅವರಿಂದಲೂ ಗ್ರೀನ್​ ಸಿಗ್ನಲ್ ಸಿಕ್ಕಿದೆ. ಈ ಸಿನಿಮಾಗೆ ಅಶ್ವಿನಿ ತಿವಾರಿ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮೂರ್ತಿ ದಂಪತಿಯ ಸಾಧನೆಯ ಕಥೆ ಸಾಮಾನ್ಯ ಅನ್ನಿಸಿದರು, ಅವರ ಲವ್​ ಸ್ಟೋರಿ ಸಿಕ್ಕಾಪಟ್ಟೆ ಕೂತಹಲಕಾರಿ​ ಆಗಿದೆ. ಈ ಚಿತ್ರಕ್ಕೆ ‘ಮೂರ್ತಿ’ ಎಂದು ಹೆಸರಿಡಲು ಚರ್ಚೆಗಳು ನಡೆಯುತ್ತಿವೆ. ನಿಲ್​ ಬತೇ ಸನಾತ, ಅಮ್ಮ ಕಾನುಕ, ಬರೇಲಿ ಕಿ ಬರ್ಫಿ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ, ಸದ್ಯ ಪಂಗಾ ಅನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಮೂರ್ತಿ ಚಿತ್ರಕ್ಕೆ ಶ್ರೇಯಸ್​ ಜೈನ್​ ಮತ್ತು ಪಿಯೂಶ್ ಗುಪ್ತಾ ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ. ನಾರಾಯಣ ಮೂರ್ತಿ ಅವರ ಹಿನ್ನಲೆ, ಅವರು ಸುಧಾಮೂರ್ತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಸಂಕಷ್ಟಗಳನ್ನು ಎದುರಿಸಿ, ಇನ್ಫೋಸಿಸ್​​ ಸಂಸ್ಥೆಯನ್ನು ಉಳಿಸಿ, ಬೆಳೆಸಿದ್ದು ಹೇಗೆ ಅನ್ನೋದನ್ನು ಈ ಸಿನೆಮಾದಲ್ಲಿ ತೆರೆಗೆ ತರಲಾಗುತ್ತದೆ. ಅನ್ನುಕೊಂಡಿದ್ದೇ ಆದರೆ ಮುಂದಿನ ವರ್ಷ ಮೂರ್ತಿ ಚಿತ್ರ ಸೆಟ್ಟೇರಲಿದೆ.

ಈಗಾಗಲೇ ಅಶ್ವಿನಿ ತಿವಾರಿ, ‘ಮೂರ್ತಿ’ ಸಿನಿಮಾ ಮಾಡುವುದಾಗಿ ಘೋಷಿಸಿದ್ದು, ಸುಧಾಮೂರ್ತಿ ಅವರ ಪಾತ್ರದಲ್ಲಿ ಆಲಿಯಾ ಭಟ್​ ನಟಿಸಬೇಕು ಅನ್ನುವ ಇರಾದೆ ವ್ಯಕ್ತಪಡಿಸಿದ್ದಾರೆ. ಇನ್ನು ನಾರಾಯಣ ಮೂರ್ತಿ ಅವರ ಪಾತ್ರಕ್ಕೆ ಅಕ್ಷಯ್​ ಕುಮಾರ್, ರಣ್​ಬೀರ್​ ಕಪೂರ್​, ಸುಶಾಂತ್​ ಸಿಂಗ್​ ಹೆಸರುಗಳು ಈಗ ಕೇಳಿ ಬರುತ್ತಿದೆ. ಶೀಘ್ರದಲ್ಲೇ ಕಲಾವಿದರ ಆಯ್ಕೆ ನಡೆಯಲಿದ್ದು, ಯಾರು ಯಾವ ಪಾತ್ರ ಮಾಡುತ್ತಾರೆ ಎನ್ನುವುದು ಕನ್ಫರ್ಮ್​ ಆಗಲಿದೆ.


మరింత సమాచారం తెలుసుకోండి: