ಬೆಂಗಳೂರು: ಕಿಚ್ಚ ಸುದೀಪ್. ಪೈಲ್ವಾನ್ ಕಿಚ್ಚ ಸುದೀಪ್ ಎಂದೇ ಭಾರೀ ಹೆಸರು ಮಾಡಿ ಇದೀಗ ಹಾಲಿವುಡ್ ಸಿನಿಮಾಗಳಲ್ಲೂ ನಟಿಸುತ್ತಿರುವ ನಟ ಸುದೀಪ್ ಭಾವುಕರಾಗಿದ್ದಾರೆ.  ನಿಸ್ವಾರ್ಥ ಈ ಅಭಿಮಾನಕ್ಕೆ ಜಗತ್ತಿನಲ್ಲಿ ಬೆಲೆಕಟ್ಟಲಾದಿತೆ. ಇದೊಂದು ವಿಶೇಷ ಅಭಿಮಾನಿಯ ಅಭಿಮಾನದ ಕಥೆ. ಆ ನಟನ ದರ್ಶನಕ್ಕಾಗಿ ಮುಗ್ದ ಹುಡುಗಿ ಮೂರು ವರ್ಷ ಕಾದಂತಹ ಕವಿತೆ ಇದು.
 
 ದೀಪಿಕಾ ಕವತಾರು ಎಂಬ ಪುಟ್ಟ ಬಾಲಕಿ ಮೂಲತಃ ಮಂಗಳೂರಿನ ಮುಲ್ಕಿ ಮೂಲದವಳು. ಈಕೆಗೆ ಅಪ್ಪ ಅಪ್ಪ ಊಟ ಮಾಡಿಸುವ ನೆಪದಲ್ಲಿ ಸುದೀಪ್ ಅವರನ್ನು ತೋರಿ ಊಟ ಮಾಡಿಸುತ್ತಿದ್ರು. ಅಭಿನಯ ಚಕ್ರವರ್ತಿಯನ್ನು ಕಂಡ ತಕ್ಷಣ ಈ ಪುಟ್ಟಿಗೆ ಅದೇನೋ ಸಂಭ್ರಮ. ಸುದೀಪ್ ಮಾಮನನ್ನು ನೋಡಬೇಕು ಮಾಮನ ಜೊತೆ ಮಾತನಾಡಬೇಕು ಎಂಬುವ ಅಭಿಮಾನದ ಹಠ ಹೀಡಿದ್ಲು. ಕಿಚ್ಚನಿಗಾಗಿ ಔಷಧಿ ಊಟವನ್ನು ಬಿಟ್ಟು ಸತ್ಯಾಗ್ರಹವನ್ನು ಮಾಡಿದ್ಲು. ಕೊನೆಗೂ ಸುದೀಪ್ ಅವರ ದರ್ಶನ ಈ ವಿಶೇಷ ಅಭಿಮಾನಿಗೆ ಆಗಿದೆ.
 
ಕಳೆದ ಮೂರು ವರ್ಷದಿಂದ ದೀಪಿಕಾ ಸುದೀಪ್ ಅವರನ್ನು ಬಹಳ ಹಚ್ಚಿಕೊಂಡಿದ್ದಾಳೆ. ಅವರನ್ನು ನೋಡಲೇ ಬೇಕು ಎಂಬುವ ಹಠಕ್ಕೆ ಬಿದ್ದು, ತಂದೆ ತಾಯಿಯಾದ ಸಂತೋಷ್ ಮತ್ತು ಲಕ್ಷ್ಮಿ , ಸುದೀಪ್ ಅವರ ಆಪ್ತ ಜಾಕ್ ಮಂಜು ಅವರನ್ನು ಸಂಪರ್ಕಿಸಿದ್ದಾರೆ. ಆಗ ಸುದೀಪ್ ಆಪ್ತ ಮಂಜು ಅವರು ಮಂಗಳೂರಿಗೆ ಬಂದಾಗ ಭೇಟಿ ಮಾಡಿಸುವ ಭರವಸೆ ಕೊಟ್ಟಿದ್ದಾರೆ. ಅಲ್ಲದೇ, ಎರಡ್ಮೂರು ಬಾರಿ ವಿಡಿಯೋ ಕಾಲ್ ಮೂಲಕ ವೀಶೇಷ ಅಭಿಮಾನಿಯ ಜೊತೆ ಅಭಿನಯ ಚಕ್ರವರ್ತಿ ಮಾತನಾಡಿದ್ದಾರೆ. ಪ್ರತಿಸಲವು ಸುದೀಪ್ ಅವರ ಭೇಟಿಗೆ ಪ್ರಯತ್ನಿಸುತ್ತಿದ್ರು, ಆದರೆ, ಪ್ರಯತ್ನ ಯಶಸ್ವಿಯಾಗಿರಲಿಲ್ಲ. ಕಳೆದ ಶುಕ್ರವಾರ ಕೋಟಿಗೊಬ್ಬ-3 ಶೂಟಿಂಗ್ ವೇಳೆ ಸುದೀಪ್ ಅವರನ್ನು ದೀಪಿಕಾಗೆ ಭೇಟಿ ಮಾಡುವ ಅವಕಾಶ ಸಿಕ್ಕಿದೆ. ಒಂದು ಕಡೆ ಈ ವಿಶೇಷ ಅಭಿಮಾನಿಯನ್ನು ಕಂಡ ಸುದೀಪ್ ಮನಸ್ಸು ಕರಗಿ ಒಂದು ಕ್ಷಣ ಭಾವುಕರಾಗಿದ್ದಾರೆ. ಇನ್ನೊಂದು ಕಡೆ ದೀಪಿಕಾ ಕೊಟ್ಟ ಉಡುಗೊರೆ ಹೂವು ಮತ್ತು ಕನ್ನಡಕವು ಹಿಡಿದು ಸಂತೋಷ ಪಟ್ಟಿದ್ದಾರೆ. ಅಲ್ಲದೇ ಆ ಪುಟ್ಟು ಕಂದನ ಹಾಡನ್ನು ಕೇಳಿ ಸಂಭ್ರಮಿಸಿದರು. ಇದೀಗ ಪುಟ್ಟ ಬಾಲಕಿ ಕಿಚ್ಚನ ಕಂಡು ಸಂಭ್ರಮಿಸಿದ್ದಾಳೆ.

మరింత సమాచారం తెలుసుకోండి: