ಸತೀಶ್ ನೀನಾಸಂ ಇದೀಗ ಬ್ರಹ್ಮಚಾರಿ ಆಗಿರೋದು ನಿಮಗೆಲ್ಲಾ ಗೊತ್ತೇ ಇದೆ. ಅದು ನಿಜ ಜೀವನದಲ್ಲಿ ಅಲ್ಲ. ಸಿನಿಮಾದಲ್ಲಿ ಅನ್ನೋದು ಮಾತ್ರ ನೆನಪಿರಲಿ. ಹೌದು, ನಿರ್ಮಾಪಕ ಉದಯ್ ಮೆಹ್ತಾ ಅವರ ನಿರ್ಮಾಣದ ಬ್ರಹ್ಮಚಾರಿ ಚಿತ್ರದಲ್ಲಿ ಸತೀಶ್ ನೀನಾಸಂ ಅಭಿನಯಿಸುತ್ತಿದ್ದಾರೆ. 


ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಬ್ರಹ್ಮಚಾರಿ ಚಿತ್ರದ ಟೀಸರ್ ಹೊರ ಬಂದಿದೆ. ಈ ಟೀಸರ್ ಬಿಡುಗಡೆ ಮಾಡಿದ್ದು ಬೇರೆ ಯಾರೂ ಅಲ್ಲ. ದತ್ತಣ್ಣ. ಇನ್ನು ಚಿತ್ರದ ನಾಯಕಿಯಾಗಿ ಅದಿತಿ ಪ್ರಭುದೇವ್ ಅವರು ಕಾಣಿಸಿಕೊಂಡಿದ್ದಾರೆ. ಹೀಗಾಗಿ ಇಬ್ಬರ ಜೋಡಿ ಅದ್ಹೇಗೆ ವರ್ಕೌಟ್ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.


ಅಷ್ಟಕ್ಕೂ ಈ ಟೀಸರ್ ಬಿಡುಗಡೆ ಮಾಡಿದ ವಿಶೇಷ ಏನು ಗೊತ್ತಾ? ನಿನ್ನೆ ಸತೀಶ್ ನೀನಾಸಂ ಅವರ ಹುಟ್ಟು ಹಬ್ಬವೂ ಹೌದು. ಹೀಗಾಗಿ ನಿನ್ನೆಯೇ ಬ್ರಹ್ಮಚಾರಿ ಟೀಸರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ಉಯ್ ಮೆಹ್ತಾ ಅವರು ಈ ಚಿತ್ರದ ನಿರ್ಮಾಪಕರು. ಚಿತ್ರದ ಟೀಸರ್ ಅದ್ದೂರಿಯಾಗಿಯೇ ಹೊರ ಬಂದಿದೆ. ಟೈಟಲ್ ಬ್ರಹ್ಮಚಾರಿ ಆದರೆ, ಅಡಿಬರಹ ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಎಂದು ಇಡಲಾಗಿದೆ. 


మరింత సమాచారం తెలుసుకోండి: