ಇಂದೋರ್ನಲ್ಲಿ ರಸ್ತೆಯಲ್ಲಿ ಬಿದ್ದಿರುವ ನೋಟುಗಳನ್ನು ಪೊಲೀಸರು ಎತ್ತಿಕೊಳ್ಳುವುದನ್ನು ತೋರಿಸುವ ವೀಡಿಯೊವನ್ನು ಕೊರೊನಾವೈರಸ್ ಹರಡುವ ಉದ್ದೇಶದಿಂದ ಎಂಜಲು ಸವರಿ ಎಸೆಯಲ್ಪಟ್ಟಿದೆ ಎಂಬ ಕೋಮು ದೃಷ್ಟಿ ಕೋನದೊಂದಿಗೆ  ಸಾಮಾಜಿಕ  ಜಾಲತಾಣಗಳಲ್ಲಿ ಸಾಕಷ್ಟು ಜನರು ಇದನ್ನು ಹಂಚಿಕೊಂಡಿದ್ದಾರೆ. ಆದರೆ ಈ ಘಟನೆ ಸತ್ಯವೊ ಇಲ್ಲ ಸುಳ್ಳೊ ಎಂಬುದರ ಬಗ್ಗೆ ಇಲ್ಲಿದೆ ವಿವರ..

 

ಏಪ್ರಿಲ್ 16 ರಂದು ಮಧ್ಯಪ್ರದೇಶದ ಇಂದೋರ್ನಲ್ಲಿ ಮಧ್ಯಮ ವರ್ಗದ ಪ್ರದೇಶದ ರಸ್ತೆಯಲ್ಲಿ 500 , 200 , 100 , 50 ಮತ್ತು 10 ರೂಗಳ ಕರೆನ್ಸಿ ನೋಟುಗಳು ಪತ್ತೆಯಾಗಿವೆ. ಕೂಡಲೇ ಅಲ್ಲಿನ ನಿವಾಸಿಗಳು ಈ ಸುದ್ದಿಯನ್ನು ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ಗೆ ತಿಳಿಸಿದ್ದಾರೆ. ನಂತರ ಐಎಂಸಿ ತಂಡ ಮತ್ತು ಹೀರಾ ನಗರದ ಪೊಲೀಸರು ಸುತ್ತುವರಿದರು ಮುಖವಾಡಗಳು ಮತ್ತು ಕೈಗವಸುಗಳನ್ನು ಧರಿಸಿದ ಪೊಲೀಸರು ಹಣವನ್ನು ಮೊಹರು ಮಾಡಲು ಕೋಲುಗಳನ್ನು ಬಳಸಿ ತೆಗೆದು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬುವುದನ್ನು ವೈರಲ್ ವೀಡಿಯೊದಲ್ಲಿ ನೋಡಬಹುದಾಗಿದೆ.

 

1.18 ನಿಮಿಷಗಳ ವೀಡಿಯೊದಲ್ಲಿ, ಪೊಲೀಸರು ಕೈಗವಸುಗಳು ಮತ್ತು ಕೋಲುಗಳನ್ನು ಬಳಸಿ ರಸ್ತೆಯಲ್ಲಿ ಬಿದ್ದಿರುವ ನೋಟುಗಳನ್ನು ತೆಗೆದುಕೊಂಡು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸುವುದನ್ನು ಕಾಣಬಹುದು. ಆದರೆ ದಾರಿಹೋಕರು ಅವರನ್ನು ಸುತ್ತುವರೆದಿರುತ್ತಾರೆ. “ಒಂದು ಮೂಲವು ವೈರಸ್ ಹರಡಲು ಅನೇಕ ನವೀನ ವಿಧಾನಗಳನ್ನು ಕಂಡುಕೊಳ್ಳುತ್ತದೆ. ಹೊಸ ತಂತ್ರದೊಂದಿಗೆ ಕರೆನ್ಸಿಯನ್ನು ಎಸೆಯುತ್ತಿದೆ ಮತ್ತು ಪೊಲೀಸರಿಗೆ ನಿಮ್ಮನ್ನು ಕಂಡುಹಿಡಿಯಲು ಎಂದಿಗೂ ಸಾಧ್ಯವಾಗುವುದಿಲ್ಲ!”. ಈ ಹಿಂದಿ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ‘ಒಂದು ಮೂಲ’ ಎನ್ನುವುದು ಮುಸ್ಲಿಂ ಸಮುದಾಯವು corona-19  ಅನ್ನು ಹರಡುತ್ತಿದೆ ಎಂದು ಹೇಳುವ ವ್ಯಂಗ್ಯದ ಉಲ್ಲೇಖವಾಗಿದೆ.

 

ಆದರೆ ಈ ವಿಷಯದ ಕುರಿತು ಪ್ಯಾಕ್ಟ್ ಚಕ್ ಮಾಡಿ ಈ ನೋಟುಗಳನ್ನು ಉದ್ದೇಶಪೂರ್ವಕವಾಗಿ ಎಸೆಯಲಾಗಿಲ್ಲ, ಗಾಡಿ ಚಲಾಯಿಸುವಾಗ ಒಂದಷ್ಟು ಹಣವು ತನ್ನ ಜೇಬಿನಿಂದ ಬಿದ್ದಿದೆ ಎಂದು ಡೆಲಿವರಿ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ ಎಂದು ಇಂದೋರ್ ಪೊಲೀಸರು ತಿಳಿಸಿದ್ದಾರೆ.

 

ಫ್ಯಾಕ್ಟ್ ಚೆಕ್ ನಡೆಸುವ ಬೂಮ್ ಲೈವ್ ಹೀರಾ ನಗರ ಪೊಲೀಸ್ ಠಾಣೆ ಉಸ್ತುವಾರಿ ರಾಜೀವ್ ಭಡೋರಿಯಾ ಅವರನ್ನು ಸಂಪರ್ಕಿಸಿದಾಗ ಅವರು, “ನಾವು ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪ್ರವೇಶಿಸಿದ್ದೇವೆ. ಅಡುಗೆ ಗ್ಯಾಸ್ ಸಿಲಿಂಡರ್ಗಳನ್ನು ತಲುಪಿಸುವ ವ್ಯಕ್ತಿಯು ಗಾಡಿ ಓಡಿಸುವಾಗ ಅತನ ಜೇಬಿನಿಂದ ನೋಟುಗಳು ಬಿದ್ದಿವೆ ಎಂದು ಖಚಿತಪಡಿಸಿಕೊಂಡಿದ್ದೇವೆ. ಭೀತಿ ಹರಡಿದ ನಂತರ ರಾಮ್ ನರೇಂದ್ರ ಯಾದವ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಪೊಲೀಸರನ್ನು ಸಂಪರ್ಕಿಸಿ, ಹಣ ತನ್ನದು ಎಂದು ತಿಳಿಸಿ ವಾಪಸ್ಸು ಪಡೆಯಲು ನಿರ್ಧರಿಸಿದ್ದಾರೆ ಎಂದು ಭಡೋರಿಯಾ ಹೇಳಿದ್ದಾರೆ.

 

ಯಾದವ್ ತನ್ನ ಹಣವನ್ನು ವಾಪಸ್ ಪಡೆಯಲು ಮುಂದೆ ಬಂದಿದ್ದಾನೆ ಮತ್ತು ನಾವು ಅಗತ್ಯ ಕಾರ್ಯವಿಧಾನದ ನಂತರ ಅದನ್ನು ಅವನಿಗೆ ಹಸ್ತಾಂತರಿಸುತ್ತೇವೆ”ಎಂದು ಅವರು ಹೇಳಿದ್ದಾರೆ. ಆ ಹಣಕ್ಕೆ ಎಂಜಲು ಸವರಿ ಕೊರೊನಾ ಹರಡಲು ಎಸೆದಿರುವುದು ಎಂಬುದು ಸುಳ್ಳು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

 

 

ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು ಎಂದು ಗಾದೆಯೇ ಇರುವಾಗ ಯಾವುದೇ ವಿಷಯವನ್ನು ಪ್ರೆಶ್ನೆ ಮಾಡದೆ ಒಪ್ಪಿಕೊಳ್ಳಬಾರದು. ಜೊತೆಗೆ ನಡೆದ ಘಟನೆಯನ್ನು  ಯಾರದ್ದೋ ತಲೆಗೆ ಕಟ್ಟುವುದು ಸರಿಯಿಲ್ಲ ಇದರಿಂದ ಕೋಮು ಸಾಮರಸ್ಯ ಕಡಿಮೆಯಾಗಿ ಧರ್ಮ ಧರ್ಮಗಳ ನಡುವೆ ಕಲಹಗಳು ಉಂಟಾಗಿ ಸಮಾಜದಲ್ಲಿ ಶಾಂತಿ ಕದಡುತ್ತದೆ ಇದಕ್ಕೆ ಜನರು ಆಸ್ಪದ ಕೊಡಬಾರದು.

 

 

మరింత సమాచారం తెలుసుకోండి: