ಟೀಂ ಇಂಡಿಯಾದ ಅತ್ಯದ್ಭುತ ಕೂಲ್ ಮಾಜಿ ಕ್ಯಾಪ್ಟನ್ ಇದೀಗ ಮರಳಿ ಕ್ರೀಡಾಂಗಣಕ್ಕೆ ಹೆಜ್ಜೆ ಇಡುವ ಸಮಯ ಸನ್ನಿಹಿತವಾಗಿದೆ. ಹೌದು, ಕಳೆದ ವರ್ಷ ಆಂಗ್ಲರ ನಾಡಲ್ಲಿ ನಡೆದ ವಿಶ್ವಕಪ್​ ನಲ್ಲಿ ವಿರಾಟ್ ಪಡೆ ಸೆಮಿಫೈನಲ್ ​ನಲ್ಲಿ ಸೋತು ಹೊರ ಬಿದ್ದಿತ್ತು. ಆ ಪಂದ್ಯದಲ್ಲಿ ಕೊನೆಯವರೆಗೂ ತಂಡದವನ್ನ ಗೆಲ್ಲಿಸಲು ಹೋರಾಡಿದ ಧೋನಿ ರನೌಟ್ ಆಗುವ ಮೂಲಕ ಕೋಟಿ, ಕೋಟಿ ಭಾರತೀಯರ ಕನಸು ಭಗ್ನವಾಯಿತು. ಅಂದಿನಿಂದ ಧೋನಿ ಸೈಲೆಂಟ್ ಆಗಿಬಿಟ್ಟರು. 
 
ವಿಶ್ವಕಪ್ ಸೋಲು ಧೋನಿಗೆ ಇನ್ನಿಲದ ನೋವನ್ನ ಉಂಟು ಮಾಡಿತು. ಧೋನಿಗೆ ಸೋಲಿನ ಕಹಿಯನ್ನ ಮರೆಯಲು ಆಗಲಿಲ್ಲ. ಹೀಗಾಗಿ ತಂಡದಿಂದ ದೂರ ಉಳಿದು ಬಿಟ್ಟರು. ಇದರಿಂದ ಧೋನಿಯನ್ನ ಕ್ರಿಕೆಟ್​ ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಂಡು, ಧೋನಿ ಈಗ ಬರ್ತಾರೆ ಆ ಮೇಲೆ ಬರ್ತಾರೆ ಎಂದು ಅಭಿಮಾನಿಗಳು ಕಾದಿದ್ದೆ ಆಯಿತು. ಧೋನಿ ಮಾತ್ರ ಬ್ಯಾಟ್ ಹಿಡಿದು ಮೈದಾನಕ್ಕಿಳಿಯಲಿಲ್ಲ. ಇತ್ತ ಆಟವೂ ಆಡದ ಧೋನಿ ಕ್ರಿಕೆಟ್​ಗೆ ನಿವೃತ್ತಿಯಾಗ್ತಾರೆ ಎನ್ನೋ ವಿಚಾರಗಳು ಸಹ ಕೇಳಿ ಬಂದಿದ್ದವು. ಧೋನಿ ನಿವೃತ್ತಿ ವಿಚಾರ ಚರ್ಚೆಯಲ್ಲಿ ಇರುವಾಗಲೇ ಧೋನಿಗೆ ಬಿಸಿಸಿಐ ಅದೊಂದು ದಿನ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟು ಶಾಕ್ ಕೊಟ್ಟಿತ್ತು.ಹೀಗೆ ಧೋನಿ ಕ್ರಿಕೆಟ್ ಭವಿಷ್ಯ ತೂಗೂಯ್ಯಲೆಯಲ್ಲಿರುವಾಗಲೇ ಇತ್ತೀಚೆಗೆ ಧೋನಿ ತಮ್ಮ ಇನ್ಸ್ಟ್ರಾಗ್ರಾಮ್ ಅಕೌಂಟ್​ ನಲ್ಲಿ ತಾವೇ ತೆಗೆದ ಹುಲಿ ಚಿತ್ರದ ಪೋಟೋವನ್ನ ಪೋಸ್ಟ್ ಮಾಡಿದ್ದಾರೆ. ಈಮೂಲಕ ಕಮ್ ಬ್ಯಾಕ್ ಮಾಡೋ ಮುನ್ಸೂಚನೆ ನೀಡಿದ್ದಾರೆ. 
 
ಧೋನಿ ಮತ್ತೆ ಯಾವಾಗ ಮೈದಾನಕ್ಕೆ ಇಳಿಯುತ್ತಾರೆ ಎನ್ನೋ ಅಭಿಮಾನಿಗಳ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಮಾರ್ಚ್.​ 1ರಿಂದ ಧೋನಿ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿಯಲಿದ್ದಾರೆ. ಐಪಿಎಲ್ ಸೀಸನ್ ಮೂಲಕ ಧೋನಿ ಕ್ರಿಕೆಟ್ ​ಗೆ ಮತ್ತೆ ಬರುತ್ತಿದ್ದಾರೆ. ಮಾ.1ರಂದು ಧೋನಿ ಐಪಿಎಲ್ ಆಡಲು ಚೆನ್ನೈಗೆ ಬಂದು ಇಳಿಯಲಿದ್ದಾರೆ. ತಂಡದ ಆಟಗಾರರಾದ ಸುರೇಶ್ ರೈನಾ ಹಾಗೂ ಅಂಬಾಟಿ ರಾಯುಡು ಜೊತೆಗೆ ಮೊದಲ ಮೂರು ವಾರಗಳ ಕಾಲ ಅಭ್ಯಾಸ ಮಾಡಲಿದ್ದಾರೆ.ಧೋನಿ ಇದೇ ಮೊದಲ ಬಾರಿಗೆ ಐಪಿಎಲ್ ಆಡಲು ಬೇಗ ಬರುತ್ತಿದ್ದಾರೆ ಎಂದು ತಿಳಿದುಬಂದಿದೆ

మరింత సమాచారం తెలుసుకోండి: