ಸ್ಯಾಂಡಲ್ ವುಡ್ ನಲ್ಲಿ ಸಿಪಾಯಿ ಚಿತ್ರದ ಮೂಲಕ ಜನಮನ ಗೆದ್ದಿದ್ದ  ಸಿದ್ಧಾರ್ಥ್ ಮಹೇಶ್ ಸಿನಿಮಾ ಲೋಕದಲ್ಲಿ ಒಂದೇ ಚಿತ್ರದ ಮೂಲಕ ಭಾರೀ ಹವಾ ಕ್ರಿಯೇಟ್ ಮಾಡಿದ್ದರು. ಅಂತಹ ಸಿದ್ಧಾರ್ಥ್  ಮಹೇಶ್ ಇದೀಗ 'ಗರುಡ' ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. 


ಈಗಷ್ಟೇ ಗರುಡ ಟ್ರೈಲರ್ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನಲ್ಲಿ ಸದ್ದು ಆರಂಭಿಸಿದೆ. ಟೆರರಿಸಂ, ಅಂಡರ್ ವರ್ಲ್ಡ್ ಸುತ್ತ ನಡೆಯುವ ಈ ಕಥೆ ಬಹಳ ರೋಚಕವಾಗಿರಲಿದೆ ಎಂದು ತಿಳಿದು ಬಂದಿದೆ. ಸಖತ್ ಇಂಟ್ರೆಸ್ಟಿಂಗ್ ಆಗಿರುವ ಟ್ರೈಲರ್ ನೋಡಿದ ಮೇಲೆ ಪ್ರತಿಯೊಬ್ಬರಲ್ಲೂ ಕುತೂಹಲ ಹುಟ್ಟಿಕೊಂಡಿದೆ. ಆದರೆ, ಇದಕ್ಕೂ ಮೀರಿ ಚಿತ್ರದಲ್ಲಿ ಬೇರೆ ಏನೋ ಸ್ಪೆಷಲ್ ಅಂಶಗಳು ಇದೆ ಎನ್ನುವುದರಲ್ಲಿ ಇನ್ನು ಹೆಚ್ಚಿನ ಕುತೂಹಲವಿದೆ. ಅದಕ್ಕೆ ತಕ್ಕಂತೆ ಸಿದ್ಧಾರ್ಥ್ ಮತ್ತು ಶ್ರೀನಗರ ಕಿಟ್ಟಿ ಜುಗಲ್ ಬಂಧಿ ಭರ್ಜರಿಯಾಗಿಯೇ ಎದ್ದು  ಕಾಣುತ್ತಿದೆ. 


ನಿಜಕ್ಕೂ, ಸಿದ್ಧಾರ್ಥ್ ಜೊತೆಯಲ್ಲಿ ಶ್ರೀನಗರ ಕಿಟ್ಟಿ ಕೂಡ ತೆರೆಹಂಚಿಕೊಂಡಿದ್ದ, ಪೊಲೀಸ್  ಕಾಪ್ ಆಗಿ ಮಿಂಚಿದ್ದಾರೆ. ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಪೋಲೀಸ್ ಡ್ರೆಸ್ ನಲ್ಲಿ ಸಖತ್ ಕಲರ್ ಫುಲ್ ಆಗಿಯೇ ಮಿಂಚಲಿದ್ದಾರೆ ಎಂಬ ಸುದ್ದಿ ಗಾಂಧೀ ನಗರದಲ್ಲಿ ಹರಿದಾಡುತ್ತಿದೆ. 


ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಈಗ ಗುಪ್ತಚರ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಗೆ ಜೊಡಿಯಾಗಿ ಆಶಿಕಾ ರಂಗನಾಥ್ ಮತ್ತು ಐಂದ್ರಿತಾ ರೇ ಇಬ್ಬರು ನಟಿಯರಾಗಿ ನಟಿಸಿದ್ದಾರೆ. ನೃತ್ಯ ಸಂಯೋಜಕ ಧನುಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆರೇಂಜ್ ಫಿಕ್ಸಲ್ ಫಿಲಂ ಫ್ಯಾಕ್ಟರಿ ಬ್ಯಾನರ್ ನಲ್ಲಿ ರಾಜರೆಡ್ಡಿ, ಕಿಶೋರ್ ಎ, ಪ್ರಸಾದ್ ರೆಡ್ಡಿ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಗರುಡ ಚಿತ್ರಕ್ಕೆ ನಾಯಕನಟ ಸಿದ್ಧಾರ್ಥ್ ಮಹೇಶ್ ಅವರು ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಇನ್ನುಳಿದಂತೆ ರಾಜೇಶ್ ನಟರಂಗ, ರವಿಶಂಕರ್ ಗೌಡ, ರಘು ದೀಕ್ಷೀತ್, ಆದಿ ಲೋಕೇಶ್, ರಂಗಾಯಣ ರಘು ಸೇರಿದಂತೆ ದೊಡ್ಡ ತಾರಬಳಗ ಹೊಂದಿದೆ. ಜೈ ಆನಂದ್ ಅವರ ಛಾಯಾಗ್ರಹಣ, ರಘುದೀಕ್ಷಿತ್ ಅವರ ಸಂಗೀತವಿದೆ. ಸದ್ಯ ಟ್ರೈಲರ್ ಮೂಲಕ ಗಾಂಧಿನಗರದಲ್ಲಿ ಹಾರಾಡುತ್ತಿರುವ ಗರುಡ ಸದ್ಯದಲ್ಲೇ ಚಿತ್ರಮಂದಿರಲ್ಲಿ ಕಾಣಲಿದ್ದೇವೆ.




మరింత సమాచారం తెలుసుకోండి: