ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಬಿಡುಗಡೆಯಾದ ದಿನವೇ ಪೈರಸಿಯಾಗಿ  ವಾದ ವಿವಾದಗಳೇ ನಡೆದಿದ್ದವು. ಸ್ಟಾರ್ ಗಳೇ ಕಿತ್ತಾಡುವ ಹಂತಕ್ಕೆ ಬಂದು ತಲುಪಿತ್ತು. ಇದೀಗ ಸ್ವಪ್ನ ಅವರ ಹೇಳಿಕೆಯಿಂದ ಪೈಲ್ವಾನ್ ಮತ್ತೊಮ್ಮೆ ಸುದ್ದಿಯಾಗುತ್ತಿದೆ. ಇದ್ದಿದ್ದನ್ನ ಇದ್ದಂಗೆ ಹೇಳಿದ್ರೆ ಕೆಲವರಿಗೆ ಆಗೋಲ್ಲ.. ಹಂಗಂತೇಳಿ ಕಷ್ಟಕಾಲದಲ್ಲಿ ಉಪಕಾರ ಮಾಡಿದವರನ್ನು ನೆನೆಯದಿದ್ರೆ ಹೆಂಗ್ಹೇಳಿ..? ಮಾತಾಡೋರು ಹೆಂಗಿದ್ರೂ ಮಾತಾಡ್ತಾರೆ. ಯಾಕೇಳಿ..? ಅವರಿಗೆ ಮಾತನಾಡೋದು ಬಿಟ್ರೇ ಇನ್ನೇನ್ ಕೆಲಸ..? ಕಷ್ಟಕ್ಕಾದವ್ರನ್ನ ಪೈಲ್ವಾನ್ ಚಿತ್ರದ ನಿರ್ಮಾಪಕರು ಸಂತೋಷದಲ್ಲಿ ನೆನೆಸಿಕೊಂಡಿದ್ದಾರೆ. ಅದು ಪೈಲ್ವಾನ್ ಚಿತ್ರದ 5೦ನೇ ದಿನದ ಸಂಭ್ರಮದಲ್ಲಿ. ಪ್ರೇಕ್ಷಕ ಪ್ರಭು ಕೊಟ್ಟ ದುಡ್ಡಿಗೆ ನ್ಯಾಯಬದ್ಧ ಮನೋರಂಜನೆ ಕೊಟ್ಟ ಸಿನಿಮಾ. ಅದಕ್ಕೆ ಈಗ ಪೈಲ್ವಾನ್ 50ದಿನವನ್ನು ಯಶಸ್ವಿಯಾಗಿ ಪೂರೈಸಿ, ನೂರನೇ ದಿನದತ್ತ ಹೆಜ್ಜೆ ಇಡುತ್ತಿದೆ.


ನಿರ್ಮಾಪಕಿ ಸ್ವಪ್ನ ಕೃಷ್ಣ ಪೈಲ್ವಾನ್ 50 ದಿನ ಪೂರೈಸಿದ್ದಕ್ಕೆ ಸಂಭ್ರಮದಿಂದ ಟ್ವೀಟ್ ಮಾಡಿದ್ರು. ಈ ಸಕ್ಸಸ್​ಗೆ ಕಾರಣೀಭೂತರಾದವರನ್ನು ಹೃದಯ ಪೂರ್ವಕವಾಗಿ ನೆನೆದ್ರು. ಆದ್ರೆ ಆ ಟ್ವೀಟೇ ಕೆಲ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಸಂಭಾವನೆ ನಿರೀಕ್ಷೆ ಇಲ್ಲದೆ, ಒಬ್ಬ ಗ್ರೇಟ್ ಟ್ಯಾಲೆಂಟೆಡ್ ಕ್ಯಾಮೆರಾ ಮ್ಯಾನ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಆಗಬೇಕು ಅನ್ನೋ ಉದ್ದೇಶದಿಂದ ಕಿಚ್ಚ ಸುದೀಪ್ ಪೈಲ್ವಾನ್​​ ಮಾಡೋಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ರು. ನಿನ್ನ ಜೊತೆ ನಾನ್ ಇದ್ದೇನೆ ನಡಿಮುಂದೆ ಎಂದು ಹುರಿದುಂಬಿಸಿದ್ರು. ಆ ಕಾರಣಕ್ಕೆ ಇವತ್ತು ಪೈಲ್ವಾನ್ ಐದೈದು ಭಾಷೆಯಲ್ಲಿ ನಿರ್ಮಾಣವಾಗಿದ್ದು. ಐವತ್ತು ದಿನಪೂರೈಸಿದ್ದು. ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿರುವುದು. ಆದ್ರೆ ಈಗ ವಿಷಯ ಅದಲ್ಲ. ಪೈಲ್ವಾನ್​​ಗೆ ಇಬ್ಬರು ಸ್ಟಾರ್ ನಟರು ಮಾಡಿದ ಸಹಾಯ ಚರ್ಚೆಗೆ ಗುರಿಯಾಗಿದೆ.


ಹೌದು.. ನಿರ್ಮಾಪಕಿ ಸ್ವಪ್ನ ಕೃಷ್ಣ ಪೈಲ್ವಾನ್ ಯಶಸ್ವಿ 50ದಿನ ಪುರೈಸಿದಕ್ಕೆ ಧನ್ಯವಾದ ಸಮರ್ಪಣ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್​​ವುಡ್​ ಯುವರಾಜ ನಿಖಿಲ್ ಕುಮಾರ್ ಅವರ ಹೆಸರನ್ನು ಈ ಸಕ್ಸಸ್ ಸಂಭ್ರಮಕ್ಕೆ ಕಾರಣ ಎಂದಿದ್ದಾರೆ. ಇದೀಗ ಟಿಕ್ ಟಾಕ್ ಮತ್ತು ಜಾಲತಾಣಗಳಲ್ಲಿ ಮತ್ತೇ ಪೈಲ್ವಾನ್ ಅಬ್ಬರಿಸುತ್ತಿದೆ.


మరింత సమాచారం తెలుసుకోండి: