ತುಮಕೂರು: ರಾಜ್ಯ ಜೆಡಿಎಸ್ ಶಾಸಕರೊಬ್ಬರು ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಶಾಕ್ ಆದ್ರೂ ಕೂಡ ನೀವು ನಂಬಲೇ ಬೇಕಾದ ವಿಷಯವಿದು. ಅದು ಯಾರು, ಯಾಕೆ ಈ ರೀತಿ ಹೇಳಿದರು, ಏನೆಂದು ಹೊಗಳಿದರೆಂದು  ನೋಡಿ. ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ದಾಮೋದರ  ಮೋದಿಯ ಬಗ್ಗೆ ಈ ದೇಶದಲ್ಲಿ ಒಂದು ಒಳ್ಳೆ ಹೆಸರಿದೆ, ದೇಶ ಅಭಿವೃದ್ಧಿ ಮಾಡುವ ಒಳ್ಳೆ ಅಜೆಂಡಾ ಇಟ್ಟುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತುಮಕೂರು ಗ್ರಾಮಾಂತರ ಜೆಡಿಎಸ್​ ಶಾಸಕ ಗೌರಿಶಂಕರ್ ಅವರು ಶುಕ್ರವಾರ ಹಾರಿಹೊಗಳಿದ್ದಾರೆ.

ಮೋದಿ ಅವರು ದೇಶದ ಬಗ್ಗೆ ಒಳ್ಳೆ ದೃಷ್ಟಿಕೋನ ಇಟ್ಟುಕೊಂಡಿದ್ದಾರೆ ಆದರೆ ಬಿಜೆಪಿಯಲ್ಲಿನ ಕೆಲ ಮುಖಂಡರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ. ಮಾಜಿ ಶಾಸಕ ಸುರೇಶ್ ಗೌಡ ಅವ ರಂತಹ ಮುಖಂಡರಿಂದ ಬಿಜೆಪಿಗೆ ಹಾನಿಯಾಗುತ್ತಿದೆ ಎಂದು ಅವರು ಹೇಳಿದರು. ಸುರೇಶ್ ಗೌಡ ಅವರಂತವರನ್ನು ಪಕ್ಷದಿಂದ ದೂರ ಇಡಿ, ಅಭಿವೃದ್ಧಿ ಕಾಮಗಾರಿಗೆ ಬಿಡುಗಡೆಯಾದ ಹಣ ತಡೆ ಹಿಡಿಯುವಂತೆ ಸುರೇಶ್ ಗೌಡ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದ ೪೨ ಕೋಟಿ ರೂಪಾಯಿ ಮುಖ್ಯಮಂತ್ರಿ ತಡೆ ಹಿಡಿದಿದ್ದಾರೆ ಎಂದು ಗೌರಿ ಶಂಕರ್ ಅವರು ಸುರೇಶ್ ಗೌಡ ಅವರು ಬರೆದ ಪತ್ರ ಬಹಿರಂಗಪಡಿಸಿದರು.

ಅಷ್ಟೇ ಅಲ್ಲದೇ ಸುರೇಶ್  ಗೌಡ ಅವರಂತಹ ನೀಚ ಕೆಲಸ ಕುರಿತು ಪ್ರಧಾನಿ ಮೋದಿ ಅವರಿಗೆ ಟ್ವೀಟ್​ ಮಾಡುತ್ತೇನೆ. ಕೇವಲ ಪ್ರಧಾನಿ ಗಷ್ಟೆ ಅಲ್ಲ, ಅಮಿತ್ ಶಾ, ರಾಜ್ಯಪಾಲರಿಗೂ ಅವರಿಗೂ ಟ್ವೀಟ್​ ಮಾಡಿ ಸುರೇಶ್ ಗೌಡ ಬರೆದ ಪತ್ರದ ಕುರಿತು ತಿಳಿಸುತ್ತೇನೆ ಎಂದರು. ಅಂತೆಯೇ ಸುರೇಶ್ ಗೌಡ ಅವರ ಅಧಿಕಾರಿ ಗಳ ವರ್ಗಾವಣೆ ದಂಧೆ ನಡೆಸುತಿದ್ದಾರೆ, ಮಾಜಿ ಶಾಸಕ ಸುರೇಶ್ ಗೌಡ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಹೇಳಿದರು. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ. 


మరింత సమాచారం తెలుసుకోండి: