ಸ್ಯಾಂಡಲ್ ವುಡ್ ನ ದಿ ಬೆಸ್ಟ್ ಅಂಡ್ ಸ್ಪೆಷಲ್ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಚಿತ್ರ ಸೆಟ್ಟೇರುತ್ತಿರುವುದು ಗೊತ್ತಿರುವ ವಿಷಯವೇ, ಆದರೆ ಇದೀಗ ಕಬ್ಜ ಚಿತ್ರದ ವಿಲನ್ ಹೆಸರು ಹೊರ ಬಿದ್ದಿದ್ದು ಚಿತ್ರ ಮೆಲ್ಲನೆ ವೇಗ ಪಡೆಯುತ್ತಿದೆ. 
ಕನ್ನಡ, ತೆಲುಗು, ತಮಿಳುಹಾಗೂ ಹಿಂದಿಗೆ ಪರಿಚಿತವಾಗಿರುವ ಏಳು ಮಂದಿ ವಿಲನ್‌ಗಳು, ಮೊದಲ ಬಾರಿಗೆ ಈ ಚಿತ್ರಕ್ಕೆ ದೇಹ ಹುರಿಗೊಳಿಸುತ್ತಿರುವ ಹೀರೋ, ಎಲ್ಲ ಭಾಷೆಗಳಿಗೂ ಒಬ್ಬರೇ ಸ್ಟಾರ್ ನಾಯಕಿ, ನಾಲ್ಕು ರಾಜ್ಯಗಳಲ್ಲಿ ಚಿತ್ರೀಕರಣಕ್ಕೆ ಕಬ್ಜ ಇದೀಗ ಸಿದ್ದವಾಗಿದೆ. ಆರ್ ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ‘ಕಬ್ಜ’ ಚಿತ್ರದ ಕುರಿತು ಕುತೂಹಲಕಾರಿ ಮಾಹಿತಿಯೂ ಇಲ್ಲಿದೆ ನೋಡಿ. 


ಉಪೇಂದ್ರ ನಟನೆಯ ‘ಕಬ್ಜ’ ಚಿತ್ರಕ್ಕಾಗಿ ಒಂದೊಂದು ಭಾಷೆಯಲ್ಲಿ ಒಬ್ಬೊಬ್ಬರು ಫೈನಲ್ ಆಗಿದ್ದಾರೆ.  ಕನ್ನಡದ ಪ್ರಕಾಶ್ ರೈ, ತೆಲುಗಿನಿಂದ ಜಗಪತಿ ಬಾಬು, ಜಯಪ್ರಕಾಶ್ ರೆಡ್ಡಿ, ಹಿಂದಿಯಿಂದ ನಾನಾ ಪಾಟೇಕರ್, ಪ್ರದೀಪ್ ರಾವತ್, ಮನೋಜ್ ಬಾಜ್‌ಪೇಯಿ ಹಾಗೂ ತಮಿಳಿನಿಂದ ಸಮುದ್ರ ಖಣಿ ಉಪ್ಪಿ ಮುಂದೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇವರೆಲ್ಲ ಆಯಾ ಭಾಷೆಗಳಲ್ಲಿ ಖಳನಾಯಕರಾಗಿಯೇ ಹೆಚ್ಚಾಗಿ ಮಿಂಚಿದವರು. ಇತ್ತೀಚೆಗೆ ನಿರ್ದೇಶಕ ಸಮುದ್ರ ಖಣಿ ಕೂಡ ನೆಗೆಟಿವ್ ಪಾತ್ರಗಳಲ್ಲಿ ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಇವರೆಲ್ಲ ‘ಕಬ್ಜ' ಚಿತ್ರದಲ್ಲಿವಿಲನ್ ಗಳಾಗಿರುತ್ತಾರೆ ಎಂಬುದು ವೈರಲ್ ಆಗುತ್ತಿರುವ ಸುದ್ದಿ. 


 ‘ಕಬ್ಜ’ ಚಿತ್ರಕ್ಕಾಗಿ ಮೂರು ಬೇರೆ ಚಿತ್ರಗಳನ್ನು ಬಿಟ್ಟು ಒಂದು ವರ್ಷ ಒಂದೇ ಚಿತ್ರಕ್ಕಾಗಿ ಕೆಲಸ ಮಾಡುವುದಕ್ಕೆ ಉಪೇಂದ್ರ ನಿರ್ಧರಿಸಿದ್ದಾರೆ. ಸದ್ಯ ಒಪ್ಪಿಕೊಂಡಿರುವ ‘ಬುದ್ಧಿವಂತ 2’ ಚಿತ್ರೀಕರಣ ಮುಗಿಸಿದ್ದು, 15ರಿಂದ ಆರ್ ಚಂದ್ರು ಚಿತ್ರದ ಶೂಟಿಂಗ್ ಅಡ್ಡಾದಲ್ಲಿ ಪ್ರತ್ಯೇಕ್ಷರಾಗುತ್ತಿದ್ದಾರೆ. ಉಪೇಂದ್ರ ಮೊದಲ ಬಾರಿಗೆ ‘ಕಬ್ಜ’ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿ ಬಾಡಿ ಬಿಲ್ಡ್ ಮಾಡುವುದಕ್ಕೆ ಮುಂದಾಗಿದ್ದಾರೆ. ಗಡ್ಡ, ಮೀಸೆ ಬಿಟ್ಟು ಭರ್ಜರಿಯಾಗಿಯೇ ಅಬ್ಬರಿಸಲಿದ್ದಾರೆ.  ಶೂಟಿಂಗ್ ವಿವರಗಳು: ಇದೇ ತಿಂಗಳ 15ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ನಂತರ ಬಾಂಬೆ, ಕಲ್ಕತ್ತ, ಚೆನ್ನೈ, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಈ ನಡುವೆ ಮಧುರೈ, ಮಂಗಳೂರಿನಲ್ಲೂ ಶೂಟಿಂಗ್‌ಗೆ ಯೋಜನೆ ಹಾಕಿಕೊಳ್ಳಲಾಗಿದೆ. ನ.10ಕ್ಕೆ ಫೋಟೋಶೂಟ್ ಕೂಡ ಮಾಡಲಾಗುತ್ತಿದೆ.


మరింత సమాచారం తెలుసుకోండి: