ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿ ಮಿತಿ ಮೀರು ಹೋಗಿದೆ. ಇನ್ನೂತನಕ ಇದರ ನಿಯಂತ್ರಣ ಸಿಗುತ್ತಿಲ್ಲ. ಈ ಬೀಕರ ಪ್ರವಾಹದಿಂದ ಉತ್ತರ ಕರ್ನಾಕಟದ ಸಾವಿರಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಅಲ್ಲದೇ ಅನೇಕರಿಗೆ ಕುಡಿಯೋಕೆ ನೀರಿಲ್ಲ. ಮತ್ತು ತಿನ್ನೋಕೆ ಊಟವಿಲ್ಲದೇ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ಸ್ವಲ್ಪ ತಡವಾಗಿ ಆದರೂ ಸಹಾಯಕ್ಕೆ ಧಾವಿಸಿದೆ. ಹೌದು ಸ್ಯಾಂಡಲ್‌ವುಡ್ ನಟ-ನಟಿಯರು ಇದೀಗ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ. 

ಹೌದು ಸ್ಯಾಂಡಲ್‌ವುಡ್ ಪ್ರಮುಖ ನಟರಾದ ಸುದೀಪ್, ದರ್ಶನ್, ಶರಣ್, ಜಗ್ಗೇಶ್, ದುನಿಯಾ ವಿಜಯ್, ಯಶ್ ಅಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಕಷ್ಟದಲ್ಲಿರೋ ಜನರ ನೆರವಿಗೆ ಧಾವಿಸಿದ್ದಾರೆ. ಕರ್ನಾಟಕದ ಯಾವುದೇ ಮೂಲೆಯಲ್ಲಿ ಸಮಸ್ಯೆ ಸಂಭವಿಸಿದರೂ ಸ್ಯಾಂಡಲ್‌ವುಡ್‌ ನಟರು ಅಲ್ಲಿಗೆ ಧಾವಿಸುತ್ತಾರೆ. ಸ್ಪಂಧಿಸುತ್ತಾರೆ. ಈ ಭಾರಿ ಕೂಡ ಚಿತ್ರರಂಗ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ನೆರವಿಗೆ ನಿಂತಿದೆ. 

ನೆರೆ ಪೀಡಿತ ಕುಟುಂಬಗಳಿಗೆ ರಾಜ್ ಕುಟುಂಬ ನಿಂತಿದೆ. ಅವರ ಜೊತೆಗೆ ನಟಿ ಹರಿಪ್ರಿಯಾ ಸಹ ಜೊತೆ ಆಗಿದ್ದಾರೆ. ಅವರೂ ಕೂಡ ಸಹಾಯ ಹಸ್ತ ಚಾಚಿದ್ದಾರೆ. ಇನ್ನು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ನೆರವಿಗೆ ಧಾವಿಸಿದ್ದಾರೆ. ಅಷ್ಟಕ್ಕೂ ಪುನೀತ್ ರಾಜ್‌ಕುಮಾರ್ ಅವರು ಹೇಳಿದ್ದಾದರೂ ಏನು ಅನ್ನೋದು ಇಲ್ಲಿದೆ. 

"ಉತ್ತರ ಕರ್ನಾಟಕದಲ್ಲಿ ಆದಂತ ಪ್ರವಾಹ ದೊಡ್ಡದಾದಂತ ಹಾನಿಯನ್ನೇ ಸೃಷ್ಟಿ ಮಾಡಿದೆ. ಈ ನಾವೆಲ್ಲರು ಸೇರಿ ಸ್ಪಂದಿಸಬೇಕಾದ ಸಮಯ ಬಂದಿದೆ. ಇದೇ ಕಾರಣಕ್ಕೆ ನಾನು ಮತ್ತು ನಮ್ಮ ಸಂಸ್ಥೆ ನಮ್ಮ ಕೈಲಾದ ಸಹಾಯ ಮಾಡುತ್ತಿದ್ದೇವೆ. ಇನ್ನು ನಾನು ನಿಮಗೆ ಕೇಳಿಕೊಳ್ಳುವುದೇನಂದರೆ ನಮ್ಮ ಕರ್ನಾಟಕ ಜನತೆಗೆ ಮತ್ತು ಅಭಿಮಾನಿಗಳಿಗೆ ನಿಮ್ಮ ಸುತ್ತಮುತ್ತ ಇರುವ ಸೇವ ಕೇಂದ್ರಗಳಿಗೆ ಹೋಗಿ ನಿಮ್ಮ ಕೈಲಾದ ಸಹಾಯ ಮಾಡಿ" ಎಂದು ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಅವರು ಕರೆ ನೀಡಿದ್ದಾರೆ. 

ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸಹ ಪ್ರವಾಹ ಪೀಡಿತರಿಗೆ ಸ್ಪಂಧಿಸಿದ್ದಾರೆ. ಒಗ್ಗಟ್ಟಿನಿಂದ ಸಹಾಯ ಮಾಡೋಣ ಎಂದು ಶಿವರಾಜ್‌ ಕುಮಾರ್ ಅವರು ಹೇಳಿದ್ದಾರೆ. ಹಾಗಾದರೆ ಶಿವರಾಜ್ ಕುಮಾರ್ ಅವರು ಹೇಳಿದ್ದೇನು? ಉತ್ತರ ಕರ್ನಾಟಕದಲ್ಲಿ ಪ್ರವಾಹ ಆಗಿ ಎಷ್ಟೋ ಜನ ಕಷ್ಟದಲ್ಲಿದ್ದಾರೆ. ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ. ಯಾವಾಗಲೂ ಇರುತ್ತೇವೆ. ಅಭಿಮಾನಿಗಳು ಈಗಾಗಲೇ ಸಹಾಯ ಮಾಡುತ್ತಿದ್ದಾರೆ. ಇಡೀ ಚಿತ್ರರಂಗದ ನೆರವಿದೆ ನಿಂತಿದೆ. ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಎಂದು ಹೇಳಿದ್ದಾರೆ.


మరింత సమాచారం తెలుసుకోండి: