ಪ್ರಸ್ತುತ ರಾಜ್ಯದ ಉಪಮುಖ್ಯಮಂತ್ರಿ ಲಕ್ಷಣ್ ಸವದಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ರುಚಿ ಅನುಭವಿಸಿದ್ದರು. ಆದರೂ ಸಹ ಕಮಲದ ಹೈಕಮಾಂಡ್ ನಿಂದ ಉಪ ಮುಖ್ಯಮಂತ್ರಿ ಆಫರ್ ಹುಡುಕಿಕೊಂಡು ಬಂದಿತ್ತು. ಶಾಸಕರಲ್ಲದಿದ್ದರು ಡಿಸಿಎಂ ಮಾಡಿದ್ದು ಕೆಲವರಿಗೆ ಸಹಿಸಲೇ ಆಗಲಿಲ್ಲ. ಆದರೂ ಹೈಕಮಾಂಡ್ ನಿರ್ದೇಶನದ ಮೇರೆಗೆ ಸುಮ್ಮನಾದರೂ. ಕಾರಣವೇನು? ಇದೀಗ ಉಪ ಚುನಾವಣೆಯಲ್ಲಿ ಸವದಿ ಏನ್ ಮಾಡ್ತಾರೆ ಗೊತ್ತಾ. 


 ಅನರ್ಹ ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ತೀರ್ಪು ಸುಪ್ರೀಂಕೋರ್ಟ್​ನಿಂದ ಹೊರಬಿದ್ದ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಾಳೆ ಅನರ್ಹ ಶಾಸಕರೆಲ್ಲಾ ಬಿಜೆಪಿ ಸೇರ್ಪಡೆಯಾಗಲಿದ್ದು, ಬಹುತೇಕ ಅವರಿಗೆ ಟಿಕೆಟ್ ನೀಡಲು ಪಕ್ಷವೂ ನಿರ್ಧರಿಸಿದೆ. ಅಥಣಿ ಕ್ಷೇತ್ರದಲ್ಲಿ ಲಕ್ಷ್ಮಣ ಸವದಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಎದುರು ಪರಾಭವಗೊಂಡಿದ್ದರು. ಬಳಿಕ ಕುಮಟಹಳ್ಳಿ ರಾಜೀನಾಮೆ ನೀಡುವ ಮೂಲಕ ಬಿಜೆಪಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ. ಇದರಿಂದ, ಸವದಿಗೆ ಭಾರೀ ನಿರಾಸೆಯಾಗಿದೆ. ಅಲ್ಲದೇ, ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಕೂಡ ಸವದಿಯ ಅಳಿವು- ಉಳಿವಿನ‌ ಬಗ್ಗೆ ನಾಯಕರು ಯಾವುದೇ ಚರ್ಚೆ ಕೂಡ ನಡೆಸಲಿಲ್ಲ. ಅಲ್ಲದೇ, ಅಥಣಿ ಕ್ಷೇತ್ರದ ಚುನಾವಣೆ ಉಸ್ತುವಾರಿಯಾಗಿ ಸವದಿಯವರನ್ನೇ ನೇಮಿಸಿದ್ದಾರೆ. ಅಂದರೆ, ಪಕ್ಷ ನಿಲ್ಲಿಸುವ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಸವದಿಗೆ ನೀಡಿದ್ದಾರೆ.


ಯಾರ ಕೃಪಾಕಟಾಕ್ಷದಿಂದ ಸವದಿ ಮಂತ್ರಿಯಾದರೋ ಈಗ ಅವರೇ ಸವದಿ ಅವರ ರಾಜಕೀಯ ಭವಿಷ್ಯ ಉಳಿಸಬೇಕಾಗಿದೆ. ಇಲ್ಲವಾದಲ್ಲಿ ಸವದಿ ಮತ್ತೆ ಒಂಟಿಯಾಗಲಿದ್ದಾರೆ. ಕೊನೆಯದಾಗಿ ಸವದಿ ಅವರ ಮುಂದೆ ಹೈಕಮಾಂಡ್ ಹಾದಿ ಮಾತ್ರ ಉಳಿದಿದೆ. ಹೈಕಮಾಂಡ್ ಅಸ್ತು ಅಂದರೆ ಸವದಿ ಡಿಸಿಎಂ ಆಗಿ ಮುಂದುವರೆಯಲಿದ್ದಾರೆ. ಒಂದು ವೇಳೆ ಹೈಕಮಾಂಡ್ ಕೈ ಚೆಲ್ಲಿದರೆ ಸವದಿ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗುತ್ತದೆ. 


ಆದ್ದರಿಂದ ಇದೀಗ ಲಕ್ಷಣ್ ಸವದಿ ಫುಲ್ ಟೆನ್ಷನ್ ನಲ್ಲಿದಾರಂತೆ. ಯಾವುದಾದರೂ ಒಂದು ಕ್ಷೇತ್ರ ಸಿಕ್ಕರೂ ಅಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಡಿಸಿಎಂ ಆಗಿ ಮುಂದುವರೆಯಬೇಕೆಂಬ ಅಂಬಲದಲ್ಲಿದ್ದಾರಂತೆ ಎಂಬುದು ಸದ್ಯಕ್ಕೆ ತಿಳಿದುಬಂದಿದೆ.


మరింత సమాచారం తెలుసుకోండి: