ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಕನ್ನಡದ ಅನೇಕ ಚಿತ್ರಗಳು ಬೇರೆ ಭಾಷೆಗಳಲ್ಲಿ ರೆಡಿಬಾಗುತ್ತಿವೆ. ಹೌದು, ಪೈಲ್ವಾನ್, ಶ್ರೀಮನ್ನಾರಾಯಣ ಈ ಸಾಲಿಗೆ ನಿಲ್ಲುತ್ತವೆ. ಇದೀಗ ಮಕ್ಕಳ ಚಿತ್ರವೊಂದು ಪಂಚಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಚತ್ರದ ನಿರ್ದೇಶಕ ರವಿ ಬಸ್ರೂರು.

 

(ರವಿ ಬಸ್ರೂರು) 

 

ಈ ಕುರಿತು ಹೆಚ್ಚಿನ ಡಿಟೇಲ್ಸ್ ನಿಮ್ಮ ಮುಂದೆ.

 

 

ಮಕ್ಕಳ ಚಿತ್ರಗಳೆಂದರೆ ಕಡಿಮೆ‌ ಬಜೆಟ್  ಚಿತ್ರಗಳು ಎನ್ನುವಂತಾಗಿದೆ. ಆದರೆ ಈ ಚಿತ್ರ ಗಿರ್ಮಿಟ್ ಹಾಗಲ್ಲ. ಇದು ದೊಡ್ಡ ಬಜೆಟ್ ಮೂವಿ ಎನ್ನುತ್ತಾರೆ ಚಿತ್ರದ ನಿರ್ಮಾಪಕರು. ಈ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತಯಾರಾಗಿದೆ. ಈ ಸಿನಿಮಾ‌ ಅಚ್ಚರಿಯ ಸಂಗತಿಗಳನ್ನು ಹೊತ್ತು ತರುತ್ತಿದೆ.

 

 

ಈ ಚಿತ್ರಕ್ಕೆ ಸ್ಟಾರ್ ನಟರು ಧ್ವನಿ ನೀಡಿದ್ದಾರೆ. ಹೌದು, ನಾಯಕನ ಪಾತ್ರಕ್ಕೆ ಯಶ್ ವಾಯ್ಸ್ ನೀಡಿದ್ದಾರೆ. ಇನ್ನೂ ನಾಯಕಿಯ ಪಾತ್ರಕ್ಕೆ ರಾಧಿಕಾ ಪಂಡಿತ್ ವಾಯ್ಸ್ ನೀಡಿದ್ದಾರೆ. ಹಾಗಾಗಿ ಈ ಸಿನಿಮಾ ನಿಜಕ್ಕೂ ಕುತೂಹಲ ಕೆರಳಿಸಿದೆ. 

 

 

 

మరింత సమాచారం తెలుసుకోండి: