ಚಂದನವನದಲ್ಲಿ ಬಾಹುಬಲಿ ಸಿನಿಮಾ ನಾ! ನಿರ್ದೇಶಕ ರಾಜಮೌಳಿ ಮಾಡುತ್ತಿರುವುದಾದರೂ ಏನು ಎಂದು ಕನ್ಪ್ಯೂಸ್ ಆಗ್ಬೇಡಿ. ಏಕೆಂದರೆ ನಾ ಹೇಳ ಹೊರಟಿರುವ ಸ್ಟೋರಿ ತೆಲುಗಿನ ಬಾಹುಬಲಿ ಸಿನಿಮಾ ಬಗ್ಗೆ ಅಲ್ಲ. ಬದಲಿಗೆ ಕನ್ನಡದ ಶ್ರೀ ಭರತ ಬಾಹುಬಲಿ ಚಿತ್ರದ ಬಗ್ಗೆ. ಈ ಚಿತ್ರ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿ ಹಾಕಿದೆ.  ಮಂಜು ಮಾಂಡವ್ಯ ನಿರ್ದೇಶನದ ಜೊತೆಗೆ ಭರತನಾಗಿ ಬಣ್ಣ ಹಚ್ಚಿದ್ರೆ, ಚಿಕ್ಕಣ್ಣ ಬಾಹುಬಲಿಯಾಗಿ ಸಾಥ್​ ಕೊಟ್ಟಿದ್ದಾರೆ. ಎಲ್ಲಾ ಕಮರ್ಷಿಯಲ್​, ಲವ್ ಅಂಶಗಳನ್ನ ಬೆರಸಿ  ನಿರ್ಮಿಸುತ್ತಿರುವ ಈ ಸಿನಿಮಾ ಟೀಸರನ್ನು ಈಗಾಗಲೇ ರಿಯಲ್​ ಸ್ಟಾರ್​ ಬೆಸ್ಟ್ ಡೈರೆಕ್ಟರ್ ಉಪೇಂದ್ರ ಲಾಂಚ್ ಮಾಡಿದ್ದಾರೆ.


ಯಶ್ ಅಭಿನಯದ ಮಾಸ್ಟರ್​ಪೀಸ್​ ನಂತರ ಮಂಜು ಮಾಂಡವ್ಯ ನಿರ್ದೇಶಿಸುತ್ತಿರುವ ಎರಡನೇ ಚಿತ್ರವಿದು. ಮಂಜು ಮಾಂಡವ್ಯ ನಿರ್ದೇಶನದ ಜೊತೆಗೆ ಭರತನಾಗಿ ಲೀಡ್​ ರೋಲ್​ ಪ್ಲೇ ಮಾಡಿದ್ದು, ಚಿಕ್ಕಣ್ಣ ಅವ್ರಿಗೆ ಜೊತೆಯಾಗಿದ್ದಾರೆ. ಹಳ್ಳಿ ಹಿನ್ನಲೆಯ ಸಿನಿಮಾದಲ್ಲಿ ಲೋಕಲ್​ ಬೆಂಕಿ ಬಾಯ್ಸ್​​ ಆಗಿ ಇಬ್ರು ಪ್ರೇಕ್ಷಕರನ್ನ ರಂಜಿಸೋಕ್ಕೆ ಸಿದ್ದವಾಗುತ್ತಿದ್ದಾರೆ. ಇಂಗ್ಲೆಂಡ್​​ನಿಂದ ಬರೋ ನಾಯಕಿ, ಲೋಕಲ್​ ಹುಡುಗರ ಪ್ರೀತಿ ಪಜೀತಿ, ಒಂದು ಅಪರೂಪದ ವಿಗ್ರಹಕ್ಕಾಗಿ ನಡೆಯುವ ಹುಡುಕಾಟ ಹೀಗೆ ಬಹಳ ಕುತೂಹಲಭರಿತವಾಗಿ ಕಥೆಯನ್ನ ಹೆಣೆಯಲಾಗಿದೆ. ರಾಜಾಹುಲಿ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ಮಂಜು ಮಾಂಡವ್ಯ ಇದೀಗ ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಲೀಡ್​ ರೋಲ್​ ಪ್ಲೇ ಮಾಡಿದ್ದಾರೆ.

ಚಿಕ್ಕಣ್ಣನ ಜೊತೆ ಸೇರಿ ಕಾಮಿಡಿ, ಆ್ಯಕ್ಷನ್, ಡ್ಯಾನ್ಸ್​​ ಎಲ್ಲಾ ಟ್ರೈ ಮಾಡಿದ್ದಾರೆ. ಬಿಗ್​ ಬಾಸ್​​ ಖ್ಯಾತಿಯ ಶೃತಿ ಪ್ರಕಾಶ್​ ಸ್ಪೆಷಲ್​​ ಡ್ಯಾನ್ಸಿಂಗ್​ ನಂಬರ್​ ಕೂಡ ಚಿತ್ರದಲ್ಲಿದೆ. ಶ್ರೀ ಭರತ ಬಾಹುಬಲಿ ಚಿತ್ರಕ್ಕೆ ಮಣಿಕಾಂತ್​ ಕದ್ರಿ ಟ್ಯೂನ್​ ಹಾಕಿದ್ದಾರೆ. ಐಶ್ವರ್ಯ ಫಿಲ್ಮ್​ ಪ್ರೊಡಕ್ಷನ್​ ಬ್ಯಾನರ್​​ನಲ್ಲಿ ಸ್ವತ: ಮಂಜು ಮಾಂಡವ್ಯ ಸಿನಿಮಾ ನಿರ್ಮಾಣ ಮಾಡಿದ್ದು, ಮೇಕಿಂಗ್​​ ಬಹಳ ಜೋರಾಗಿದೆ. ರಿಯಲ್​ ಸ್ಟಾರ್ ಉಪೇಂದ್ರ, ಶ್ರೀ ಭರತ ಬಾಹುಬಲಿ ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ.ಶ್ರೀ ಭರತ ಬಾಹುಬಲಿ ಚಿತ್ರದಲ್ಲಿ ಚಿಕ್ಕಣ್ಣನ ಕಾಮಿಡಿಯಿದೆ. ಲವ್​, ಆ್ಯಕ್ಷನ್​, ಎಮೋಷನ್​ ಎಲ್ಲವೂ ಈ ಸಿನಿಮಾದಲ್ಲಿದ್ದು ಕಾಮಿಡಿ ಹೈಲೆಟ್​​ ಆಗಿರಲಿದೆ.


మరింత సమాచారం తెలుసుకోండి: