ಒಮ್ಮೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರೆ ಮುಗೀತು ಕಥೆ, ನೇರವಾಗಿ ಅವರವರ ಮನೆಗಳಿಗೆ ತೆರಳಬೇಕು. ಆದರೆ ಬಿಗ್ ಬಾಸ್ ಮನೆಯಿಂದ ಚೈತ್ರ ಹೊರಗೆ ಬಂದರು ಸಹ ಇದೀಗ ಬಿಗ್ ಬಾಸ್ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಮತ್ತೇ ಚೈತ್ರ ಬಂದಿದ್ದು ನೋಡಿ ಸಹ ಸ್ಪರ್ಧಿ ಗಳೆೌಲ್ಲಾ ಫುಲ್ ಶಾಕ್ ಆಗಿದ್ದು, ಯಾಕೆ ಬಂದರು, ಏನಿದು ಸ್ಟೋರಿ ಎಂಬ ಇಂ ಟರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ. 
 
ಇತ್ತೀಚೆಗೆ ಬೋರ್ ಹೊಡೆಸುತ್ತಿರುವ ಬಿಗ್‌ಬಾಸ್‌ಗೆ ಒಂದಷ್ಟು ಕಲರ್ ತುಂಬಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಏನೇನೋ ಸರ್ಕಸ್ ಮಾಡಲಾಗುತ್ತಿದೆ. ಮನೆಗೆ ಆಗಾಗ ಯಾರನ್ನಾದರೂ ಕಳುಹಿಸಿ ಮನೋರಂಜನೆ ನೀಡಲಾಗುತ್ತಿದೆ. ಕೆಲದಿನಗಳ ಹಿಂದೆ ಸಂಗೀತ ಮಾಂತ್ರಿಕ ಗುರು ಕಿರಣ್ ಬಂದು ಒಂದಷ್ಟು ಹೊತ್ತು ಸ್ಪರ್ಧಿಗಳ ಜೊತೆ ಕಳೆದು ಹೋಗಿದ್ದಾರೆ. ನಿನ್ನೆ ಜಾದೂಗಾರ ಕುದ್ರೋಳಿ ಗಣೇಶ್ ಅವರು ಮನೆಯೊಳಗೆ ಬಂದಿದ್ದಾರೆ.  ಅವರ ಮ್ಯಾಜಿಕ್ ಮೋಡಿಯನ್ನು ಸ್ಪರ್ಧಿಗಳು ಎಂಜಾಯ್ ಮಾಡಿದ್ಧಾರೆ. 
 
ಗಣೇಶ್ ಅವರ ಬೆಡ್ ರೂಮ್ ಡೈನಿಂಗ್ ಟೇಬಲ್, ಲೀವಿಂಗ್ ಏರಿಯಾ ದಲ್ಲಿ ಮ್ಯಾಜಿಕ್ ಮಾಡಿದ ನಂತರ ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗಿದ್ದಾರೆ.  ಅಲ್ಲಿ ಇದ್ದಕ್ಕಿದ್ದಂತೆ ಚೈತ್ರಾ ಕೊಟ್ಟೂರ್ ಪ್ರತ್ಯಕ್ಷರಾಗಿದ್ದಾರೆ. ಚೈತ್ರಾರನ್ನು ನೋಡಿ ಸದಸ್ಯರೆಲ್ಲರೂ ಫುಲ್ ಶಾಕ್ ಆಗಿದ್ದಾರೆ.  ಅವರು ಮನೆಯೊಳಗೆ ಬಂದಿದ್ದು ಅಷ್ಟು ಖುಷಿಯಾ ದಂತೆ ಕಾಣಿಸದಿರುವುದು ವಿಚಿತ್ರವಾಗಿತ್ತು. 
 
ಮನೆಯೊಳಗಿದ್ದಾಗ ಚೈತ್ರಾ ಅಸಂಬದ್ಧ ಮಾತುಗಳನ್ನು ಆಡುತ್ತಾ ಕಿರಿಕಿರಿ ಎನಿಸುವಂತೆ ನಡೆದುಕೊಳ್ಳುತ್ತಿದ್ದರು.  ನಾಲ್ಕನೇ ವಾರ ಎಲಿಮನೇಟ್ ಆಗಿ ಹೊರ ಹೋಗಿದ್ದರು. ಆಗ ಕಿಚ್ಚ ಸುದೀಪ್ ಜೊತೆ ಮಾತನಾಡುವಾಗ, ಹೇಗನಿಸುತ್ತಿದೆ ಎಂದಾಗ ನನ್ನ ಅರ್ಧ ಸೀರೆಯನ್ನು ಹರಿದು ಮನೆಯೊಳಗೆ ಬಿಟ್ಟು ಹೋಗುತ್ತಿದ್ದೇನೆ' ಎಂದಿದ್ದರು.  ಈಗ ಆ ಸೀರೆಯನ್ನು ತೆಗೆದುಕೊಂಡು ಹೋಗಲು ಬಂದಿರಬಹುದಾ? ಮತ್ತೆ ವೈಲ್ಡ್ ಕಾಲ್ಡ್ ಎಂಟ್ರಿ ಪಡೆದಿರಬಹುದಾ? ಸ್ಪರ್ಧಿಗಳಿಗೆ ಶಾಕ್ ಕೊಡಲು ಒಂದೆರಡು ದಿನ ಗೆಸ್ಟ್ ಆಗಿ ಇರ್ತಾರಾ? ಎಂಬುದು ಕುತೂಹಲ ಮೂಡಿಸಿದ್ದು, ಪ್ರೇಕ್ಷಕರ ಮಹಾಶಯನಿಗೆ ಬಿಗ್ ಬಾಸ್ ಹೇ ಉತ್ತರ ಕೊಡಬೇಕಿದೆ.

మరింత సమాచారం తెలుసుకోండి: