ಬೆಂಗಳೂರು: ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇಡೀ ಸೌತ್ ಸಿನಿ ಇಂಡಸ್ಟ್ರಿಯ ಖ್ಯಾತ ನಟ ರಿಯಲ್ ಸ್ಟಾರ್, ಉತ್ತಮ ಪ್ರಜಾಕೀಯ ಪಕ್ಷದ ಮುಖಂಡರಾದ ನಟ ಉಪೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿದ್ದು ರಾಜ್ಯಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಅರೆಸ್ಟ್ ಮಾಡುವುದರೊಂದಿಗೆ 159 ನಂಬರ್ ಇರುವ ಟೀ ಶರ್ಟ್ ಅನ್ನು ಸಹ ಅವರಿಗೆ ನೀಡಲಾಗಿದೆ. ಹೌದು, ಶಾಕ್ ಆದರೂ ಸಹ ನಂಬಲೇಬೇಕಾದ ವಿಷಯವಿದು. ಇದರಿಂದ ಅಭಿಮಾನಿಗಳು ಸಹ ತಲೆಕೆಡಿಸಿಕೊಂಡಿದ್ದಾರೆ. ಅಸಲು ಖ್ಯಾತ ನಿರ್ದೇಶಕ, ನಟ ಉಪೇಂದ್ರ ಅರೆಸ್ಟ್ ಆಗಲು ಕಾರಣವೇನು ಗೊತ್ತಾ? ಇಲ್ಲಿದೆ ನೋಡಿ ಉತ್ತರ. 
 
ಉಪೇಂದ್ರ ಅರೆಸ್ಟ್ ಆಗಿದ್ದಾರೆ ಎಂದ ತಕ್ಷಣ ಅಭಿಮಾನಿಗಳು ಸಿನಿ ಪ್ರಿಯರು ತಲೆಕೆಡಿಸಿಕೊಳ್ಳಬೇಕಿಲ್ಲ ಏಕೆಂದರೆ ಉಪೇಂದ್ರ ಅರೆಸ್ಟ್ ಆಗಿ 159 ನಂಬರಿನ ಟೀ ಶರ್ಟ್ ಹಾಕಿರುವುದು ತಮ್ಮ ಮುಂದಿನ ಚಿತ್ರವಾದ ಬದ್ದಿವಂತ-2ರಲ್ಲಿ. ನಟ ಉಪೇಂದ್ರ ಈಗ ಬುದ್ಧಿವಂತನಿಗಾಗಿ ಕೈದಿಯಾಗಿದ್ದಾರೆ. ಅಂದರೆ, ಅವರ ಹೊಸ ಸಿನಿಮಾ ‘ಬುದ್ಧಿವಂತ 2’ನಲ್ಲಿ ಅವರು ಕೈದಿಯಾಗಿ ಕಾಣಿಸಿಕೊಳ್ಳಲಿದ್ದು, ‘ಕೈದಿ ನಂ. 159’ ಎಂಬ ಉಡುಪಿನಲ್ಲಿರುವ ಅವರ ಫಸ್ಟ್​ಲುಕ್ ಬಿಡುಗಡೆ ಆಗಿದೆ.
 
‘ಇಡೀ ಸಿನಿಮಾ ಮೈಂಡ್​ಗೇಮ್ ಥರದಲ್ಲಿ ಇರಲಿದ್ದು, ಒಬ್ಬರ ತಂತ್ರಕ್ಕೆ ಮತ್ತೊಬ್ಬರ ಪ್ರತಿತಂತ್ರದ ಮಾದರಿಯಲ್ಲಿ ಇಡೀ ಚಿತ್ರ ಸಾಗಲಿದೆ’ ಎನ್ನುತ್ತಾರೆ ನಿರ್ದೇಶಕ ಎಂ. ಜಯರಾಮ್ ಭದ್ರಾವತಿ. ‘ಈ ಸಿನಿಮಾದಲ್ಲಿ ಉಪೇಂದ್ರ ಅವರು ಎರಡು ಶೇಡ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿ ಕೈದಿಯ ಲುಕ್ ಮೊದಲಾರ್ಧದಲ್ಲಿ ಕಾಣಿಸಿಕೊಳ್ಳಲಿದೆ. ಈ ಭಾಗದ ದೃಶ್ಯಗಳನ್ನು ಇತ್ತೀಚೆಗೆ ಶಿವಮೊಗ್ಗದ ಹಳೇ ಜೈಲು ಆವರಣದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಅದಕ್ಕೆಂದೇ 60 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾದ ಸೆಟ್ ಹಾಕಲಾಗಿದ್ದು, 400-500 ಸಹ ಕಲಾವಿದರನ್ನು ಬಳಸಿಕೊಂಡು 13 ದಿನಗಳ ಶೂಟಿಂಗ್ ಮಾಡಲಾಗಿದೆ’ ಎಂದು ನಿರ್ದೇಶಕರು ವಿವರಣೆ ನೀಡಿದರು.
 
‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ನಿರ್ವಪಕ ಡಾ. ಟಿ.ಆರ್. ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ. ಮೇಘನಾ ರಾಜ್, ಸೋನಾಲ್ ಮೊಂತೆರೋ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಸೆಟ್ ಅನ್ನು ಶೂಟಿಂಗ್ ಗಾಗಿ ತಮಿಳು ಚಿತ್ರಕ್ಕೆ ನೀಡಲಾಗಿತ್ತು.

మరింత సమాచారం తెలుసుకోండి: