ಬೆಂಗಳೂರು: ಸ್ಯಾಂಡಲ್ ವುಡ್ ನ ಒಡೆಯ ಚಾಲೆಂಜಿಂಗ್ ಸ್ಟಾರ್ ನಟರ ದರ್ಶನ್ ಬರೀ ಸಿನಿಮಾಗಳಷ್ಟೇ  ಅಲ್ಲ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿದ್ದರು. ಆದರೆ ಇದೀಗ ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆಗಳನ್ನು ನೀಡಿದ್ದಾರೆ. ಆದ್ದರಿಂದ ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ. 
 
ಧ್ರುವ ಸಿನಿಮಾದಲ್ಲಿ ಡಿಬಾಸ್​ ದರ್ಶನ್​ ಹೀಗೆ ನೋ ಪಾಲಿಟಿಕ್ಸ್​ ನೋ ಪಾಲಿಟಿಕ್ಸ್​ ಅಂತ ಹಾಡಿ ಕುಣಿದಿದ್ರು. ಸುಂಟರಗಾಳಿ ಸಿನಿಮಾದಲ್ಲಿ ಪ್ರಚಾರ ಮಾಡಿ ತಾಯಿ ಶ್ರೀಮತಿ ಲಲಿತಾ ದೇವಿಯನ್ನ ಗೆಲ್ಲಿಸಿದ್ರು. ಇದೆಲ್ಲ ರೀಲ್​ ಕಥೆಯಾಯ್ತು. ಕಳೆದ ವರ್ಷ ಮಂಡ್ಯ ರಣಕಣದಲ್ಲಿ ದರ್ಶನ್, ಮದರ್​ ಇಂಡಿಯಾ​​​ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದು, ಸುಮಲತಾ ಅಂಬರೀಶ್ ಗೆದ್ದಿದ್ದು ಕಣ್ಣ ಮುಂದಿದೆ. ಸುಮಲತಾ ಮಾತ್ರವಲ್ಲ, ತಮ್ಮ ಆಪ್ತರ ಪರವಾಗಿಯೂ ಈ ಹಿಂದಿನ ಚುನಾವಣೆಗಳಲ್ಲಿ ದಚ್ಚು ಪ್ರಚಾರ ಮಾಡಿದ್ರು. ಆದ್ರೀಗ ಮತ್ತೊಮ್ಮೆ ಡಿಬಾಸ್ ದರ್ಶನ್​​ ಪಾಲಿಟಿಕ್ಸ್​​ಗೆ ಸೈ ಅಂದಿದ್ದಾರೆ.
 
ಬಾಕ್ಸಾಫೀಸ್​ ಸುಲ್ತಾನ್​​ ದರ್ಶನ್​​ ಪಾಲಿಟಿಕ್ಸ್ ​ಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಆದ್ರೆ ಅದು ರಿಯಲ್​ ಅಲ್ಲ, ರೀಲ್​ನಲ್ಲಿ. ಹೌದು, ನಟ ದರ್ಶನ್​ ಅಭಿನಯದ ಮುಂದಿನ ಸಿನಿಮಾದಲ್ಲಿ ಪಾಲಿಟಿಕ್ಸ್ ​​ಗೆ ಸಂಬಂಧಿಸಿದ ಕಥೆಯಿದೆಯಂತೆ. ತಾರಕ್​ ಚಿತ್ರತಂಡದ ಜೊತೆ ಕೆಲಸ ಮಾಡೋಕ್ಕೆ ದರ್ಶನ್​ ಈಗಾಗಲೇ ಗ್ರೀನ್​ ಸಿಗ್ನಲ್​ ಕೊಟ್ಟಾಗಿದೆ. ರಾಜ ವೀರಮದಕರಿನಾಯಕ ಸಿನಿಮಾ ಜೊತೆಗೆ ಮಿಲನಾ ಪ್ರಕಾಶ್​ ನಿರ್ದೇಶನದ ಈ ಸಿನಿಮಾ ಕೂಡ ಸಿದ್ಧವಾಗಲಿದೆ.
 
ಡಿಬಾಸ್ ಅಭಿನಯದ 55ನೇ ಸಿನಿಮಾವನ್ನ ಮಿಲನಾ ಪ್ರಕಾಶ್​​ ನಿರ್ದೇಶಿಸೋದು ಪಕ್ಕಾ ಆಗಿದೆ. ಕೆ. ಎಸ್​ ದುಷ್ಯಂತ್​ ಈ ಚಿತ್ರಕ್ಕೆ ಬಂಡವಾಳ ಹಾಕ್ತಿದ್ದಾರೆ. ಇದು ಪೊಲಿಟಿಕಲ್ ಥ್ರಿಲ್ಲರ್​ ಕಥೆಯಾಗಿದ್ದು, ದರ್ಶನ್​ ಸಹ ಒಪ್ಪಿದ್ದಾರಂತೆ. ಅಧಿಕಾರಕ್ಕಾಗಿ ಎರಡು ಪೊಲಿಟಿಕಲ್ ಫ್ಯಾಮಿಲಿಗಳ ನಡುವೆ ನಡೆಯುವ ಕಾದಾಟದ ಕಹಾನಿಯನ್ನಈ ಸಿನಿಮಾದಲ್ಲಿ ಪ್ರಕಾಶ್​ ಹೇಳೋಕ್ಕೆ ಹೊರಟಿದ್ದಾರೆ.
 
ಈಗಾಗಲೇ ಕೇರಳದಲ್ಲಿ ರಾಜವೀರ ಮದಕರಿನಾಯಕ ಶೂಟಿಂಗ್​ ಶುರುವಾಗಿದೆ. ಮದಕರಿ ನಾಯಕ ದೊಡ್ಡ ಸಿನಿಮಾ ಆಗಿರೋದ್ರಿಂದ ನಿರ್ದಿಷ್ಟ ಕಾಲ್​ಶೀಟ್​ ಅಂತ ದರ್ಶನ್​ ಕೊಟ್ಟಿಲ್ಲ. ಆದ್ರೆ,ಮದಕರಿ ಜೊತೆಗೆ ಮಿಲನಾ ಪ್ರಕಾಶ್​ ನಿರ್ದೇಶನದಲ್ಲಿ ಚಿತ್ರದಲ್ಲಿ ನಟಿಸೋಕ್ಕೆ ಓಕೆ ಎಂದಿದ್ದು ಅಭಿಮಾನಿಗಳು ದಿಲ್ ಕುಶ್ ಆಗಿದ್ದಾರೆ.

మరింత సమాచారం తెలుసుకోండి: