ಬೆಂಗಳೂರು: ರಾಜಧಾನಿ ಬೆಂಗಳೂರು ವಿಶ್ವದ ಪ್ರಮುಖ ನಗರಗಳಲ್ಲಿ ಅತೀ ಪ್ರಮುಖವಾದ ಸಿಟಿ. ಹೌದು, ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಬೆಂಗಳೂರ ಶರವೇಗದಲ್ಲಿ ಬೆಳೆಯುತ್ತಿದೆ. ಇದೀಗ ಈ ನಗರದಲ್ಲಿಯೇ ಫಿಲ್ಮ್‌ ಸಿಟಿಯನ್ನು ನಿರ್ಮಿಸುವುದು ನಿಶ್ಚಿತವಾಗಿದೆ. 
 
ನಮ್ಮ ರಾಜ್ಯದಲ್ಲಿಯೇ ಫಿಲ್ಮ್ ಸಿಟಿ ನಿರ್ಮಿಸುವ ದಶಕಗಳ ಕನಸಿಗೆ ಮರುಚಾಲನೆ ದೊರೆತಿದೆ. ಹೌದು, ಚಿತ್ರ ನಿರ್ಮಾಣ ಸೌಲಭ್ಯ, ಆ್ಯನಿಮೇಷನ್‌ ಕೇಂದ್ರವನ್ನೂ ಒಳಗೊಂಡು ಪ್ರವಾಸಿ ಆಕರ್ಷಣೆಯಿರುವ ವಿಶ್ವ ದರ್ಜೆಯ ಫಿಲ್ಮ್‌ ಸಿಟಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿ ನಿರ್ಮಿಸಲು ಸರಕಾರ ನಿರ್ಧರಿಸಿದ್ದು, ಅದರ ಕೆಲಸಗಳು ಶೀಘ್ರದಲ್ಲೇ ನಡೆಯುವವು ಎಂದಿದ್ದಾರೆ.
 
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರು, ಎಚ್‌ಡಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಾಮನಗರ ಹಾಗೂ ನಂತರ ಕನಕಪುರ ರಸ್ತೆಯ ರೋರಿಚ್‌ ಎಸ್ಟೇಟ್‌ನಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವ ಘೋಷಣೆ ಮಾಡಲಾಗಿತ್ತು. ಇದೀಗ, ಬೆಂಗಳೂರು ನಗರದ ಹೊರವಲಯದ ಸೂಕ್ತ ಜಾಗದಲ್ಲಿ ಚಿತ್ರ ನಗರಿ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿದೆ. ಸಿಎಂ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು "ಬೆಂಗಳೂರು ಹೊರವಲಯದಲ್ಲಿ ಫಿಲ್ಮ್‌ ಸಿಟಿಯನ್ನು ನಿರ್ಮಿಸುವುದು ನಿಶ್ಚಿತ. ಸಿಎಂ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸ್ಥಳ ನಿಗದಿಪಡಿಸಲಾಗುವುದು’’ ಎಂದು ತಿಳಿಸಿದರು.
 
‘‘ಚಲನಚಿತ್ರರಂಗಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ಫಿಲ್ಮ್‌ ಸಿಟಿಯಲ್ಲಿಇರಲಿವೆ. ಡಿಸ್ನಿ ಲ್ಯಾಂಡ್‌ ಸೇರಿ ದೇಶ, ವಿದೇಶದ ಹಲವು ಫಿಲ್ಮ್‌ ಸಿಟಿಗಳನ್ನು ಅಧ್ಯಯನ ಮಾಡಿ ಉತ್ತಮ ಹಾಗೂ ವಿಭಿನ್ನವಾದ ಫಿಲ್ಮ್‌ಸಿಟಿ ಮಾಡಲು ನಿರ್ಧರಿಸಲಾಗಿದೆ. ಇದು ಪ್ರವಾಸೋದ್ಯಮ ಚಟುವಟಿಕೆಗಳಿಗೂ ಪೂರಕವಾಗಿರಬೇಕು. ಅನಿಮೇಷನ್‌ ರಂಗದಲ್ಲಿ ಬೆಂಗಳೂರು ಹೆಸರು ಮಾಡಿದ್ದು,ಇನ್ನಷ್ಟು ಉತ್ತೇಜನ ಸಿಗಲಿದೆ. ಎಲ್ಲಿ ಮತ್ತು ಎಷ್ಟು ವಿಸ್ತೀರ್ಣದಲ್ಲಿ ಫಿಲ್ಮ್‌ ಸಿಟಿ ನಿರ್ಮಾಣವಾಗಲಿದೆ ಎಂಬ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು’’ ಎಂದು ಹೇಳಿದರು. ಎಸ್ಟೇಟ್‌ನಲ್ಲಿ‘ಆರ್ಟ್‌ ಆ್ಯಂಡ್‌ ಕ್ರಾಫ್ಟ್‌ ವಿಲೇಜ್‌’ ಸ್ಥಾಪನೆ ಮಾಡುವ ನಿರ್ಧಾರ ಮಾಡಲಾಗಿದೆ. ಇಲ್ಲಿ ಫಿಲ್ಮ್‌ ಸಿಟಿ ನಿರ್ಮಿಸುವ ಪ್ರಸ್ತಾವನೆ ಕೈಬಿಡಲಾಗಿದೆ. ಪ್ರಕೃತಿ ಸೌಂದರ್ಯದ ಅದ್ಭುತ ತಾಣವನ್ನಾಗಿಸಲಿದೆ ಎಂದು ತಿಳಿಸಿದ್ದು ಕಾರ್ಯರೂಪಕ್ಕೆ ತರುವ ದೊಡ್ಡ ಸವಾಲು ಅವರಮುಂದಿದೆ.

మరింత సమాచారం తెలుసుకోండి: