ಇಂದು ಕೊರೋರ ವೈರಸ್ ಇಡೀ ಪ್ರಪಂಚಕ್ಕೇ ಲಗ್ಗೆ ಇಟ್ಟು ಅನೇಕ ದೇಶಗಳಿಗೆ ವ್ಯಾಪಿಸಿ ಕೊಟ್ಯಾಂತರ ಮಂದಿಯನ್ನು ಸಾವಿನ ದವಡೆಯಲ್ಲಿ ಸಿಕ್ಕಿಸಿದೆ, ಇನ್ನು ಲಕ್ಷಾಂತರ ಮಂದಿಯನ್ನು ಕೊರೋನಾ ಬಲಿತೆಗೆದುಕೊಂಡಿದೆ, ಇಂತಹ ಈ ಕೊರೋನಾ ವೈರಸ್ ಅನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ದೇಶಗಳು ಕೊರೋನಾ ವೈರಸ್ ಗೆ ಲಸಿಕೆಯನ್ನು ಸಂಶೋಧಿಸುತ್ತಿದ್ದಾರೆ. ಪ್ರತಿನಿತ್ಯವೂ ಕೂಡ ಸಾಕಷ್ಟು ಪಾಸಿಟೀವ್ ಪ್ರಕರಣಗಳು ಪರೀಕ್ಷೆಯಿಂದ ದೃಡ ಪಡುತ್ತಿದೆ ಈ ವಿಷಯ ಒಂದು ಕಡೆಯಾದರೆ ಮತ್ತೊಂದು ಆಶ್ಚರ್ಯಕರ ಸಂಗತಿ ಏನೆಂದರೆ ಕೊರೋನಾ ಪರೀಕ್ಷೆಯನ್ನು ಮಾಡಿಸಿದ ಅದೆಷ್ಟೋ ಜನರಲ್ಲಿ ಒಂದು ಅದ್ಬುತವಾದ ವಿಷಯವೊಂದು ಬೆಳಕಿಗೆ ಬಂದಿದೆ ಈ ವಿಷಯ ಕೊರೋದಿಂದ ಹುಟ್ಟಿಕೊಂಡ ಆತಂಕವನ್ನು ಕಡಿಮೆ ಮಾಡಿದೆ.. 

 

ಮಹಾಮಾರಿ ಕರೊನಾ ವೈರಸ್​ ಮಣಿಸಲು ದೇಹದ ಇಮ್ಯುನಿಟಿ ಶಕ್ತಿಯೇ ಪ್ರಮುಖ ಸಾಧನ ಎಂಬುದು ಎಲ್ಲರಿಗೂ ತಿಳಿದಿದೆ. ದೇಶದ ಕೆಲವರಿಗೆ ಕರೊನಾ ವೈರಸ್​ ಬಂದು ಹೋಗುವುದು ಗೊತ್ತಾಗುವುದಿಲ್ಲ ಎಂದು ಈ ಹಿಂದೆ ತಜ್ಞರು ಹೇಳಿದ ಮಾತಿಗೆ ನೂತನ ವರದಿಯೊಂದು ಪುಷ್ಟಿ ನೀಡಿದೆ.

 

ಈಗಾಗಲೇ ಕೆಲವರು ಆಯಂಟಿಬಾಡಿ ಬೆಳೆಸಿಕೊಂಡು ಕರೊನಾ ವಿರುದ್ಧ ಸೆಣಸಿದ್ದಾರೆ ಎಂಬುದು ಥೈರೋಕೇರ್ ಲ್ಯಾಬೋರೇಟರಿ​ ಹೆಸರಿನ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬಹಿರಂಗವಾಗಿದೆ. ಸಂಸ್ಥೆಯು ಆಯಂಟಿಬಾಡಿ ಟೆಸ್ಟ್​ ನಡೆಸಿದ್ದು, ಇದರಲ್ಲಿ ರಾಜ್ಯಕ್ಕೆ ಗುಡ್​ನ್ಯೂಸ್​ ಸಿಕ್ಕಿದೆ. ದೇಶಾದ್ಯಂತ ಸುಮಾರು 600 ಏರಿಯಾಗಳಲ್ಲಿ 60 ಸಾವಿರ ಪರೀಕ್ಷೆಗಳನ್ನು ಥೈರೋಕೇರ್​ ಸಂಸ್ಥೆ ನಡೆಸಿದೆ.

 

ಅಧ್ಯಯನ ಪ್ರಕಾರ ದೇಶದಲ್ಲಿ ಈಗಾಗಲೇ 15% ಮಂದಿಗೆ ಕರೊನಾ ಬಂದು ಹೋಗಿದೆ. ಅಂದರೆ ದೇಶದ 18 ಕೋಟಿ ಮಂದಿಯಲ್ಲಿ ಪ್ರತಿರೋಧಕ ಶಕ್ತಿ ಬೆಳೆದಿದೆ ಎನ್ನುತ್ತಿದೆ ಥೈರೋಕೇರ್ ಲ್ಯಾಬೋರೇಟರಿಯ ಅಂಕಿ-ಅಂಶಗಳು.

 

ಈಗಾಗಲೇ ಕರೊನಾ ಬೆಂಗಳೂರಿನ ಪೀಣ್ಯ ದಾಸರಹಳ್ಳಿಯಲ್ಲಿ ಕರೊನಾ ಬಂದು ಹೋಗಿದೆ. ಇಲ್ಲಿ ನಡೆಸಿದ ಆಯಂಟಿಬಾಡಿ ಟೆಸ್ಟ್​ನಲ್ಲಿ ಶೇ.44 ಮಂದಿಯಲ್ಲಿ ಕರೊನಾ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಬಳ್ಳಾರಿಯಲ್ಲೂ ಶೇ. 24 ಮಂದಿಗೆ ಕರೊನಾ ಈಗಾಗಲೇ ಬಂದು ಹೋಗಿದೆ. ಅಚ್ಚರಿ ಎನಿಸುವ ರೀತಿಯಲ್ಲಿ ಆಯಂಟಿಬಾಡಿ ಬೆಳೆದಿದೆ ಎನ್ನುತ್ತಿದೆ ಈ ಅಧ್ಯಯನ.

 

మరింత సమాచారం తెలుసుకోండి: