ಒಂದು ಮೊಟ್ಟೆಯ  ಕತೆ ಮಾಡಿ ಎಲ್ಲರ ಮನ ಗೆದ್ದಿದ್ದ ರಾಜ್. ಬಿ. ಶೆಟ್ಟಿ ಇದೀಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಡುತ್ತಿದ್ದಾರೆ. ಹೌದು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಸಾಂಗ್ ಇದೀಗ ರಿಲೀಸ್ ಆಗಿದೆ. ಈ ಸಾಂಗ್ ರೋಮ್ಯಾಂಟಿಕ್ ಆಗಿದೆ. 


ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಟಿ. ಆರ್. ಚಂದ್ರಶೇಖರ್ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ನಿರ್ಮಾಣ ಆಗುತ್ತಿದೆ. ಜೊತೆಗೆ ಸುಜಯ್ ಶಾಸ್ತ್ರಿ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಜ್. ಬಿ. ಶೆಟ್ಟಿ ಹಾಗೂ ಕವಿತಾಗೌಡ ಅವರು ಅಭಿನಯಿಸಿದ್ದಾರೆ. 


ಸ್ವಾಗತಂ ಕೃಷ್ಣ ಎಂಬ ಮೊದಲ ಹಾಡು ಹಿಟ್ ಆಗಿತ್ತು. ಇದೀಗ ಜಯಂತ್ ಕಾಯ್ಕಿಣಿ ಅವರು ಮತ್ತೊಂದು ಹಾಡು ಬರೆದಿದ್ದಾರೆ. ಅದು ಏನನ್ನು ಹೇಳಲು ಹೋಗಿ ಎಂಬ ರೊಮ್ಯಾಂಟಿಕ್ ಹಾಡು. ಇದೀಗ ರಿಲೀಸ್ ಆಗಿರುವುದು ಇದೇ ಹಾಡು. ಈ ಚಿತ್ರದ ಒಂದೊಂದು ಹಾಡೂ ಕೂಡ ವಿಭಿನ್ನವಾಗಿವೆ. 


మరింత సమాచారం తెలుసుకోండి: