ರಾಧಿಕಾ ಪಂಡಿತ್ ಮದುವೆ ಆದ ಮೇಲೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅಂತ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗಾಗಲೇ ರಾಧಿಕಾ ಪಂಡಿತ್ ಅವರು ಆದಿ ಲಕ್ಷ್ಮೀ ಪುರಾಣ ಚಿತ್ರದಲ್ಲಿ ಅಭಿನಯಿಸ್ತಾ ಇರೋದು ನಿಮಗೆಲ್ಲ ಗೊತ್ತೆ ಇದೆ. ರಾಕ್ ಲೈನ್ ವೆಂಕಟೇಶ ಈ ಚಿತ್ರದ ನಿರ್ಮಾಣ ಜವಾಬ್ದಾರಿ ಹೊತ್ತಿದ್ದಾರೆ. 

 

ಮಣಿರತ್ನಂ ಅವರ ಜೊತೆಗೆ ಹಲವು ಸಿನಿಮಾಗಳಲ್ಲಿ ನಿರ್ದೇಶನದ ಅನುಭವ ಪಡೆದಿರುವ ಪ್ರಿಯಾ ವಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಪ್ರಿಯಾ ನಿರ್ದೇಶನ್ ಮೊದಲ ಕನ್ನಡ ಸಿನಿಮಾ.  ಇನ್ನೇನು ಚಿತ್ರ ಬಿಡುಗಡೆ ಹಂತಕ್ಕೆ ಈಗಾಗಲೇ ಬಂದಿದೆ. 

 

ಇದೇ ಜೂನ್ 21 ರಂದು ‌ಚಿತ್ರ ಆಡಿಯೋ ಬಿಡುಗಡೆ ಇದೆ. ಮುಂದಿನ‌ ತಿಂಗಳು ಸಿನಿಮಾ ತೆರೆ ಮೇಲೆ ಬರಲಿದೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕ‌ನಾಟನಾಗಿ ಅಭಿನಯಿಸಿದ್ದಾರೆ. ಇದನ್ನು ರಾಧಿಕಾ ಪಂಡಿತ್ ಅವರ ಕಂ ಬ್ಯಾಕ್ ಸಿನಿಮಾ ಎನ್ನಬಹುದು. 

 

 

 

మరింత సమాచారం తెలుసుకోండి: