ಕೆಜಿಎಫ್ ಚಿತ್ರದ ಮೂಲಕ ರಾಷ್ಟ್ರಾದ್ಯಂತ ಸದ್ದು ಮಾಡಿದ ನಟ ಯಶ್ ಇದೀಗ ಗಣಿ ನಾಡು ಬಳ್ಳಾರಿಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ಇವರಿಗೇನು ಕೆಲಸ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅದು ಯಾಕೆ ಗೊತ್ತಾ, ಈ ವಾರ ಬಳ್ಳಾರಿಯತ್ತ ಚಿತ್ರ ತಂಡದ ಪಯಣ ಕನ್ನಡದಲ್ಲಿ ಸದ್ಯಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರ “ಕೆಜಿಎಫ್-2′.
 
ತನ್ನ ಮಗಳ ಹುಟ್ಟುಹಬ್ಬ ಕೂಡ ಅದ್ಧೂರಿಯಾಗಿ ಆಚರಿಸಿದ ಯಶ್‌, ಈಗ “ಕೆಜಿಎಫ್-2′ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಚಿತ್ರದ ಚಿತ್ರೀಕರಣ ಬೆಂಗಳೂರಲ್ಲಿ ನಡೆಯುತ್ತಿದ್ದು, ಬುಧವಾರ ಯಶ್‌ ತಂಡ ಸೇರಿಕೊಂಡಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಲ್ಲಿ ನಡೆಯಲಿರುವ ಚಿತ್ರೀಕರಣ ಆ ನಂತರ ಬಳ್ಳಾರಿಯತ್ತ ಪಯಣ ಬೆಳೆಸಲಿದೆ. ಬಳ್ಳಾರಿಯಲ್ಲಿ ಚಿತ್ರದ ಮುಖ್ಯ ದೃಶ್ಯಗಳನ್ನು ಚಿತ್ರೀಕರಿಸಲು ನಿರ್ದೇಶಕ ಪ್ರಶಾಂತ್‌ ನೀಲ್‌ ತಯಾರಿ ನಡೆಸಿದ್ದಾರೆ.
ಇನ್ನು “ಕೆಜಿಎಫ್-2′ ಚಿತ್ರ ಹಲವು ಕಾರಣಗಳಿಗೆ ಕುತೂಹಲ ಮೂಡಿಸಿರುವುದು ನಿಜ. ಚಿತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ದತ್‌ ಹಾಗು ನಟಿ ರವೀನಾ ಟಂಡನ್‌ ಕೂಡ  ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಪಾತ್ರದ ಮೂಲಕ ರವೀನಾ ಟಂಡನ್‌ ಗಮನಸೆಳೆಯಲಿದ್ದಾರೆ.
 
 ಅದರೊಂದಿಗೆ ಸಂಜಯ್‌ದತ್‌ ಅವರು ಸಹ ಅಧೀರ ಎಂಬ ಭಯಂಕರವಾಗಿರುವ ಪಾತ್ರದ ಮೂಲಕ ಎಂಟ್ರಿಕೊಟ್ಟಿದ್ದಾರೆ. ಅವರ ಭಾಗದ ಕೆಲ ದೃಶ್ಯಗಳನ್ನೂ ಚಿತ್ರೀಕರಿಸಲಾಗಿದೆ. ತ್ರದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಂಡರೆ, ಉಳಿದಂತೆ ಹಿರಿಯ ನಟ ಅನಂತ್‌ನಾಗ್‌, ಮಾಳವಿಕ ಅವಿನಾಶ್‌, ಅಚ್ಯುತ ಇತರರು ನಟಿಸುತ್ತಿದ್ದಾರೆ. ಸದ್ಯಕ್ಕಂತೂ ಎಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ “ಕೆಜಿಎಫ್-2′ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, 2020 ರ ಬೇಸಿಗೆ ರಜೆಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ.
 
“ಕೆಜಿಎಫ್’ ಬಿಡುಗಡೆ ನಂತರ ಎಲ್ಲೆಡೆ ಜೋರು ಸುದ್ದಿಯಾದ ಹಿನ್ನೆಲೆಯಲ್ಲಿ ಈಗ “ಕೆಜಿಎಫ್-2′ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆ ಇರುವುದು ಸುಳ್ಳಲ್ಲ. ಈ ಬಾರಿ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು, ಸಾಕಷ್ಟು ಪ್ಲಾನ್‌ ಮಾಡಿಕೊಂಡೇ  ಚಿತ್ರೀಕರಣಕ್ಕೆ ಅಣಿಯಾಗಿದ್ದು, ಬೇಗ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ. ಚಿತ್ರ ಮತ್ತೊಮ್ಮೆ ರಾಷ್ಟ್ರಾದ್ಯಂತ ಸದ್ದು ಮಾಡುವುದರಲ್ಲಿ ಎರಡು ಮಾತೇ ಇಲ್ಲ.

మరింత సమాచారం తెలుసుకోండి: