ಕಿರಿಕ್ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಗೆದ್ದಿದ್ದ ರಶ್ಮಿಕಾ, ನಂತರ ಗೀತಗೋವಿಂದಂ ಚಿತ್ರದ ಮೂಲಕ ತೆಲುಗು ಸಿನಿ ಪ್ರೇಕ್ಷಕರ ಮನ ಗೆದ್ದರು. ನಂತರ ಇದೀಗ ಡಿಯರ್ ಕಾಮ್ರೆಡ್ ಚಿತ್ರದ ಮೂಲಕ ಮತ್ತೆ ವಿಜಯ್ ದೇವರಕೊಂಡ ಜೊತೆ ಒಂದಾಗಿದ್ದಾರೆ.


ಆದರೆ ವಿಷಯ ಇದೀಗ ಏನಂದರೆ, ರಶ್ಮಿಕಾ ಮಂದಣ್ಣ ಕನ್ನಡಿಗರ ಕೋಪಕ್ಕೆ ತುತ್ತಾಗಿದ್ದಾರೆ. ಹೌದು, ಮೊನ್ನೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಬೆಂಗಳೂರಿಗೆ ಬಂದಿದ್ದರು. ಅದು ಡಿಯರ್ ಕಾಮ್ರೆಡ್ ಚಿತ್ರದ ಬಗ್ಗೆ ಮಾತನಾಡೋಕೆ. 


ಆಗ ತಮಿಳು ಚಾನಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮಾತನಾಡಿದ್ದು ಕನ್ನಡಿಗೆರಿಗೆ ಕೋಪಕ್ಕೆ ಕಾರಣವಾಗಿದೆ. ಹೌದು, ರಶ್ಮಿಕಾ ಹೇಳಿದ್ದಿಷ್ಟು, ನನಗೆ ಕನ್ನಡ ಬರುವುದಿಲ್ಲ ಎಂದಿದ್ದಾರೆ. ಆದೂ ಕೂಡ ತಮಿಳಿನಲ್ಲಿ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಬರಲ್ಲ ಎಂದಿರೋ ಈ ನಟಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.


మరింత సమాచారం తెలుసుకోండి: