ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ದಾಖಲೆಯನ್ನು ಬ್ರೇಕ್ ಮಾಡಲಿದೆಯಂತೆ. ಆ ಚಿತ್ರ ಯಾವುದು ಏನಿದು ಸ್ಟೋರಿ ನೀವೆ ಓದಿ.  ಆ ಚಿತ್ರ ಬೇರಾವುದೂ ಅಲ್ಲಾ, ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಅಭಿನಯದ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿ 5 ಭಾಷೆಗಳಲ್ಲಿ ತೆರೆಕಾಣಲಿರುವ ಅವನೇ ಶ್ರೀಮನ್ನಾರಾಯಣ. 


ನಿಜಾನಾ ಎಂದು ಆಶ್ಚರ್ಯವಾದರೂ ಸಹ ನಂಬಲೇ ಬೇಕಾದ ವಿಷಯವಿದು. ಆದರೆ ಇದೀಗ ಚಿತ್ರದ ಕೌಂಟ್​ಡೌನ್ ಶುರುವಾಗುವ ಬೆನ್ನಲ್ಲೇ ಒಂದೊಂದೇ ಮಾಹಿತಿಗಳು ಹೊರಬೀಳುತ್ತಿದೆ. ಆದರೆ ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವನನ್ನು 20 ದೇಶಗಳಲ್ಲಿ ಬಿಡುಗಡೆ ಮಾಡಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅದರಂತೆ ವಿಶ್ವದಾದ್ಯಂತ 'ಅವನೇ ಶ್ರೀಮನ್ನಾರಾಯಣ' 175 ಕ್ಕೂ ಅಧಿಕ ಸೆಂಟರ್​ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಈಗಾಗಲೇ ಕನ್ನಡ ಸಿನಿಮಾಗಳಿಗೆ ಪ್ಯಾನ್ ಇಂಡಿಯಾ ಮಾರ್ಕೆಟ್ ಸೃಷ್ಟಿಯಾಗಿದ್ದು,ಇದಕ್ಕೆ ಸಾಕ್ಷಿಯೇ 'ಕೆಜಿಎಫ್', 'ಕುರುಕ್ಷೇತ್ರ' ಮತ್ತು 'ಪೈಲ್ವಾನ್' ಚಿತ್ರಗಳ ಭರ್ಜರಿ ಕಲೆಕ್ಷನ್. ಇನ್ನು ಮುಂದಿನ ಸರದಿ 'ಅವನೇ ಶ್ರೀಮನ್ನಾರಾಯಣ' ಚಿತ್ರದ್ದು.


ರಕ್ಷಿತ್ ಪೋಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ಅಧ್ಬುತ ಮೇಕಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಈ ಚಿತ್ರದಲ್ಲಿ ರಿಚ್ಚಿ ಮನಸಿಗೆ ಡಿಚ್ಚಿ ಹೊಡೆಯುವ ಚೆಂದುಳ್ಳಿ ಪಾತ್ರದಲ್ಲಿ ನಟಿ ಶಾನ್ವಿ ಶ್ರೀವಾಸ್ತವ್ ಕಾಣಿಸಲಿದ್ದಾರೆ. ಹಾಗೆಯೇ ಚಿತ್ರದ ಮತ್ತೊಂದು ಹೈಲೆಟ್ ಪ್ರಮೋದ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್. ಈ ಇಬ್ಬರು ನಟರು 'ಕಿರಿಕ್ ಪಾರ್ಟಿ'ಯಲ್ಲಿ ಮಾಡಿದ ಮೋಡಿ ಇನ್ನು ಕೂಡ ಯಾರು ಮರೆತಿಲ್ಲ. ಇದೀಗ 'ಅವನೇ ಶ್ರೀಮನ್ನಾರಾಯಣ'ದಲ್ಲೂ ವಿಭಿನ್ನ ಪಾತ್ರದಲ್ಲಿ ಸ್ಯಾಂಡಲ್​ವುಡ್​ನ ಪ್ರತಿಭಾವಂತ ನಟ ಬಣ್ಣ ಹಚ್ಚಿದ್ದಾರೆ.  ಚಿತ್ರಕ್ಕೆ ನವ ನಿರ್ದೇಶಕ ಸಚಿನ್ ರವಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು 'ಟಗರು' ಖ್ಯಾತಿಯ ಚರಣ್ ರಾಜ್ ಹಾಗೂ 'ಕಿರಿಕ್ ಪಾರ್ಟಿ' ಫೇಮ್​ನ ಅಜನೀಶ್ ಬಿ ಲೋಕನಾಥ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.
ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಗಳಿವೆ.


మరింత సమాచారం తెలుసుకోండి: