ಮಾಜಿ ಸಿಎಂ ಹಾಗೂ ಬದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿದ್ದಾರೆ. ಜೊತಗೆ ಐಕ್ಯ ಮಂಟಪದ ಗೋಡೆ ಹಾಗೂ ಆಧಾರಸ್ತಂಭಗಳು ಬಿರುಕು ಬಿಟ್ಟಿರುವುದನ್ನು ಕಂಡು ಅದನ್ನು ದುರಸ್ಥಿ ಮಾಡಿಸುವ ಭರವಸೆ ನೀಡಿದ್ದಾರೆ. 


ಹೌದು, ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಗೋಡೆ ಹಾಗೂ ಐಕ್ಯ ಮಂಟಪ ಬಿರುಕು ಬಿಟ್ಟಿರುವುದರ ಬಗ್ಗೆ ದುರಸ್ಥಿ ಮಾಡಬೇಕಾದ ಅಗತ್ಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೂರು ದಿನಗಳ ಕಾಲ ಬಾದಾಮಿ, ಬಾಗಲಕೋಟೆ ಹಾಗೂ ಹಲವಡಡೆ ಪ್ರವಾಸ ಮಾಡುತ್ತಿದ್ದಾರೆ. 


ಇನ್ನು ಸರ್ಕಾರದ ಯೋಜನೆಗಳು ಜನರಿಗೆ ತಲುಪಬೇಕು ಎಂದು ಅಧಿಕಾರಿಗಳಿಗೆ ಸಿದ್ದರಾಮಯ್ಯ ಅವರು ತಾಕೀತು ಮಾಡಿದ್ದಾರೆ. ಇದರ ಜೊತೆಗೆ ಸೋಲಿನ ಪರಾಮರ್ಶೆಯನ್ನೂ ನಡೆಸಿದ ಅವರು, ಪಿಡಿಓಗಳ ಜೊತೆಗೆ ಬಹಿರಂಗ ಸಬೆ ನಡೆಸಿದರು.



మరింత సమాచారం తెలుసుకోండి: