ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಸಿನಿಮಾ ಸಿನಿಮಾ ತೆರೆ ಕಂಡ ಮೊದಲ ದಿನವೇ ಪೈರಸಿಯಾಗಿ ಚಿತ್ರತಂಡ ಭಾರೀ ನಷ್ಟ ಅನುಭವಿಸುತ್ತು. ಇದು ಡಿ ಬಾಸ್ ಅಭಿಮಾನಿಗಳ ಕೆಲಸವೆಂದೂ  ಸಹ ಊಹಾಪೋಹಗಳು ಹರಿದಾಡುತ್ತಿದ್ದವು. ಆದ್ದರಿಂದ ಕಿಚ್ಚ ಸುದೀಪ್ ಕೆಂಡಾಮಂಡಲವಾಗಿ ಖಡಕ್ ವಾರ್ನಿಂಗ್ ನೀಡಿದ್ದರು. 


ಆದರೆ ಈಗಲೂ ಸಹ ಚಿತ್ರ ಪೈರಸಿಯಾಗಿ ಜಾಲತಾಣಗಳಲ್ಲಿ ಭರ್ಜರಿಯಾಗಿಯೇ ಹರಿದಾಡುತ್ತಿದೆ. ಪ್ರಸ್ತುತ ಈಗಲೂ ಸಹ ಪೈರಸಿ ವಿರುದ್ಧ ದನಿ ಎತ್ತಿದ್ದ ಚಿತ್ರತಂಡ ಸುಮ್ಮನಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಅದರಲ್ಲೂ ಪೈರಸಿ ವಿರುದ್ಧ ದೊಡ್ಡ ದನಿ ಎತ್ತಿದ್ದ ಚಿತ್ರದ ನಾಯಕ ಕಿಚ್ಚ ಸುದೀಪ್, ತಾವಂತೂ ಈ ವಿಷಯದಲ್ಲಿ ಸುಮ್ಮನಾಗುವುದಿಲ್ಲ ಎನ್ನುವ ಮೂಲಕ ಪೈರಸಿ ಮಾಡುವವರಿಗೆ ಮತ್ತೊಮ್ಮೆ ಪರೋಕ್ಷ ಎಚ್ಚರಿಕೆಯ ಕರೆ ನೀಡಿದ್ದಾರೆ.


‘ಪೈಲ್ವಾನ್’ ಚಿತ್ರದ ಪೈರಸಿ ವಿರುದ್ಧ ಜೋರಾಗಿಯೇ ಗುಡುಗಿದ್ದ ಸುದೀಪ್, ಈಗ ವಿದೇಶದಲ್ಲಿ ‘ಕೋಟಿಗೊಬ್ಬ 3’ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿರುವುದೇನೋ ನಿಜ. ಹಾಗಂತ ಅವರು ‘ಪೈಲ್ವಾನ್’ಗೆ ಆದಂತಹ ಅನ್ಯಾಯವನ್ನು ಆ ಬಿಜಿಯಲ್ಲೂ ಮರೆತಿಲ್ಲ ಎಂಬುದು ನಿಚ್ಚಳವಾಗಿ ಕಾಣಿಸುತ್ತಿದೆ. ಮತ್ತೊಂದೆಡೆ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಕೂಡ ಪೈರಸಿ ಪ್ರಕರಣವನ್ನು ನೆನಪಿಸುತ್ತಿದ್ದಾರೆ. ಅದಕ್ಕೆಲ್ಲ ಪ್ರತಿಕ್ರಿಯೆ ಎಂಬಂತೆ ಸುದೀಪ್ ಕೂಡ ಟ್ವಿಟರ್​ನಲ್ಲಿ ಆ ಬಗ್ಗೆ ಕಡಕ್  ಸೂಚನೆಯ ಟ್ವೀಟ್ ಮಾಡಿದ್ದಾರೆ. 


‘ಇದು ಪೈರಸಿ ಪ್ರಕರಣದ ಕುರಿತ ಬಂಧನ ಹಾಗೂ ಇತರ ಅಪ್​ಡೇಟ್​ಗಳನ್ನು ಕೇಳುತ್ತಿರುವವರಿಗಾಗಿ. ಪೈರಸಿ ಪ್ರಕರಣವನ್ನು ಸುಮ್ಮನಾಗಿಸುವ ಪ್ರಯತ್ನಗಳು ನಡೆಯುತ್ತಿರುವಂತೆ ಕಾಣುತ್ತಿದೆ ಅಥವಾ ನಮ್ಮ ಪರವಾಗಿ ಎಂಎಲ್​ಸಿ ಒಬ್ಬರಿಂದ ಕರೆ ಮಾಡಿಸುವುದು ಕಡ್ಡಾಯವೇ? ನನ್ನ ಪರವಾಗಿ ಜನರು ಹಾಗೂ ಸ್ನೇಹಿತರು ಇರುವಾಗ ಅವೆಲ್ಲ ಅನಿವಾರ್ಯ ಅಂತ ನನಗೆ ಅನಿಸುತ್ತಿಲ್ಲ. ಈ ವಿಷಯದಲ್ಲಿ ವಿರಾಮ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ, ಮತ್ತೆ ದನಿ ಎತ್ತಲಾಗುವುದು’ ಎಂಬುದಾಗಿ ಸುದೀಪ್ ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಇದೀಗ ಸ್ಯಾಂಡಲ್ ವುಡ್ ನಲ್ಲಿ ಪೈರಸಿ ಭೂತ ಹಿಡಿದಿದ್ದು, ಇದನ್ನು ಬಿಡುಸುವುದಾಗಿ ಖಡಕ್ ಸೂಚನೆ ನೀಡಿದ್ದಾರೆ.


మరింత సమాచారం తెలుసుకోండి: